ಪ್ರಯಾಣಿಕರ ಎದುರೇ ಹಲ್ಲೆ ನಡೆಸಿದ ಆರೋಪ – ವಿಡಿಯೋ ವೈರಲ್ ವಿಜಯಪುರ : ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ಆಟೋವನ್ನು ಬದಿಗೆ ಸರಿಸುವಂತೆ ಹೇಳಿದ್ದ ವಿಚಾರಕ್ಕೆ ಬಸ್ ಕಂಡಕ್ಟರ್ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಿಂದಗಿ ಯಿಂದ ಮದರಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್ನ ಕಂಡಕ್ಟರ್ ಮಲ್ಲು ಲಮಾಣಿ ಮೇಲೆ ಸಂತೋಷ ದೇವೂರ ಹಾಗೂ ಆತನ ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ನಿನ್ನೆ ಆಟೋವನ್ನು…
ಕಲಬುರಗಿ: ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ನೂರಾರು ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ವೈವಾಹಿಕ ಸಂಬಂಧವೊಂದಕ್ಕೆ ಧಕ್ಕೆ ತರುವಂತಹ ಹಾಗೂ ಅನುಮಾನ ಮೂಡಿಸುವಂತಹ ಆಘಾತಕಾರಿ ವೀಡಿಯೋವೊಂದು ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಪತಿಯೊಬ್ಬರು ತಮ್ಮ ಧರ್ಮಪತ್ನಿಯನ್ನು ಮತ್ತೊಬ್ಬ ಪುರುಷನೊಂದಿಗೆ ‘ರೆಡ್ಹ್ಯಾಂಡ್’ ಆಗಿ ಹಿಡಿದಿದ್ದಾರೆ ಎನ್ನಲಾದ ವೀಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಕಣ್ಣಿಮೆಯಿಕ್ಕುವಷ್ಟರಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಈ ವೀಡಿಯೋದಲ್ಲಿ ದಂಪತಿ ಹಾಗೂ ಅಪರಿಚಿತ ವ್ಯಕ್ತಿಯ ನಡುವೆ ತೀವ್ರ ವಾಗ್ವಾದ ಮತ್ತು ಗಲಾಟೆ ನಡೆಯುತ್ತಿರುವುದು ಕಂಡುಬಂದಿದೆ….