ಮಹಾರಾಷ್ಟ್ರ: “ದೇಶಕ್ಕೆ ಅನ್ನ ನೀಡುವ ರೈತನ ಕಷ್ಟಗಳು ಯಾರಿಗೂ ಬೇಡ” ಎಂಬ ಮಾತಿಗೆ ಕನ್ನಡಿ ಹಿಡಿಯುವಂತ ಅತ್ಯಂತ ದಾರುಣ ಹಾಗೂ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಕೃಷಿ ಹಂಗಾಮು ಆರಂಭವಾಗಿರುವ ಬೆನ್ನಲ್ಲೇ ಇದ್ದ ಒಂದು ಎತ್ತು ಸಾವನ್ನಪ್ಪಿದ್ದರಿಂದ, ಮತ್ತೊಂದು ಎತ್ತು ಕೊಳ್ಳಲಾಗದೆ ಬಡ ರೈತನೊಬ್ಬ ತನ್ನ ಪತ್ನಿಯ ಹೆಗಲಿಗೇ ನೊಗ ಹೊರಿಸಿ ಹೊಲ ಉಳುಮೆ ಮಾಡಿದ್ದಾನೆ. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ದಿಯೋನಿ ತಾಲೂಕಿನ ಬಂಬಾಲಿ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದ್ದು, ರೈತ ಕುಟುಂಬದ ಈ…
ವೆಲ್ಲೂರು: ಸಿನಿಮಾ ಸ್ಟೈಲ್ನಲ್ಲಿ ತನ್ನ ಪ್ರಿಯಕರನನ್ನು ಮೆಚ್ಚಿಸಲು ಹೋಗಿ, ಉಪ ಪೊಲೀಸ್ ವರಿಷ್ಠಾಧಿಕಾರಿ (DSP) ಸಮವಸ್ತ್ರ ಧರಿಸಿ ಸಾರ್ವಜನಿಕವಾಗಿ ಓಡಾಡುತ್ತಿದ್ದ ಖತರ್ನಾಕ್ ಮಹಿಳೆಯೊಬ್ಬಳು ತಮಿಳುನಾಡಿನ ವೆಲ್ಲೂರು ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಬಂಧಿತೆಯನ್ನು ಉಮಾಮಹೇಶ್ವರಿ (33) ಎಂದು ಗುರುತಿಸಲಾಗಿದೆ. ಈಕೆ ಈಗಾಗಲೇ ವಿವಾಹಿತೆಯಾಗಿದ್ದು, ಮೂವರು ಮಕ್ಕಳ ತಾಯಿಯಾಗಿದ್ದಾಳೆ. ಪತಿ ಕೃಷಿ ಕೆಲಸ ಮಾಡಿಕೊಂಡಿದ್ದರೂ, ಈಕೆಗೆ ಲಾರಿ ಚಾಲಕನೊಬ್ಬನ ಜೊತೆ ವಿವಾಹೇತರ ಸಂಬಂಧವಿತ್ತು ಎಂದು ತಿಳಿದುಬಂದಿದೆ. ಮಾಹಿತಿಯ ಪ್ರಕಾರ, ಉಮಾಮಹೇಶ್ವರಿಗೆ ಪೊಲೀಸ್ ಸಮವಸ್ತ್ರ ಧರಿಸಬೇಕೆಂಬ ಹಂಬಲ ಬಹಳ ದಿನಗಳಿಂದ…