ನವದೆಹಲಿ: ಅಸ್ಸಾಂನ ಜೋರ್ಹತ್ನಲ್ಲಿ ಭಾರತೀಯ ವಾಯುಪಡೆಯ ಎಎನ್-೩೨ (AN-32) ಸಾರಿಗೆ ವಿಮಾನವೊಂದು ಪತನಗೊಂಡು, ಐವರು ವಾಯು ಯೋಧರು ಕರ್ತವ್ಯದ ವೇಳೆ ವೀರಮರಣ ಅಪ್ಪಿದ್ದಾರೆ. ವಾಯು ಯೋಧರ ಈ ಸರ್ವೋಚ್ಚ ತ್ಯಾಗಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಅಮರ ಯೋಧರನ್ನು ವಾಯುಪಡೆ ಗುರುತಿಸಿದೆ: ಸ್ಕ್ವಾಡ್ರನ್ ಲೆಫ್ಟಿನೆಂಟ್ ಪ್ರಶಾಂತ್ ಸಿಂಗ್ ಫ್ಲೈಟ್ ಲೆಫ್ಟಿನೆಂಟ್ ಶುಭಮ್ ಕುಮಾರ್ ಸಾರ್ಜೆಂಟ್ ಜಿತೇಂದ್ರ ಶರ್ಮಾ ಅಗ್ನಿವೀರ್ವಾಯು ಖೇಮರಾಮ್ ಕುಮಾವತ್ ಅಗ್ನಿವೀರ್ವಾಯು…
ಮಹಾರಾಷ್ಟ್ರ: “ದೇಶಕ್ಕೆ ಅನ್ನ ನೀಡುವ ರೈತನ ಕಷ್ಟಗಳು ಯಾರಿಗೂ ಬೇಡ” ಎಂಬ ಮಾತಿಗೆ ಕನ್ನಡಿ ಹಿಡಿಯುವಂತ ಅತ್ಯಂತ ದಾರುಣ ಹಾಗೂ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಕೃಷಿ ಹಂಗಾಮು ಆರಂಭವಾಗಿರುವ ಬೆನ್ನಲ್ಲೇ ಇದ್ದ ಒಂದು ಎತ್ತು ಸಾವನ್ನಪ್ಪಿದ್ದರಿಂದ, ಮತ್ತೊಂದು ಎತ್ತು ಕೊಳ್ಳಲಾಗದೆ ಬಡ ರೈತನೊಬ್ಬ ತನ್ನ ಪತ್ನಿಯ ಹೆಗಲಿಗೇ ನೊಗ ಹೊರಿಸಿ ಹೊಲ ಉಳುಮೆ ಮಾಡಿದ್ದಾನೆ. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ದಿಯೋನಿ ತಾಲೂಕಿನ ಬಂಬಾಲಿ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದ್ದು, ರೈತ ಕುಟುಂಬದ ಈ…