ನವದೆಹಲಿ: ಹೆತ್ತ ಮಗುವಿನ ಪ್ರಾಣ ಉಳಿಸಲು ತಾಯಿಯೊಬ್ಬಳು ತನ್ನ ಜೀವದ ಹಂಗು ತೊರೆದು ಮೂರನೇ ಮಹಡಿಯಿಂದ ಜಿಗಿದ ರೋಮಾಂಚನಕಾರಿ ಹಾಗೂ ಮನಕಲಕುವ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ದೆಹಲಿಯ ಮಾಲ್ವಿಯ ನಗರದ ಹೌಜ್ ರಾಣಿ ಪ್ರದೇಶದಲ್ಲಿರುವ ಹೋಟೆಲ್ವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 21 ಜನರು ಸಜೀವ ದಹನವಾಗಿದ್ದು, ಭೀಕರತೆಯ ನಡುವೆಯೂ ತಾಯಿಯೊಬ್ಬಳ ಮಮತೆಯ ಸಾಹಸ ಸದ್ಯ ದೇಶದಾದ್ಯಂತ ವೈರಲ್ ಆಗಿದೆ. ಇಲ್ಲಿನ ‘ಫ್ಲೋರಿಶ್ ಸ್ಟೇ ಬೆಡ್ ಅಂಡ್ ಬ್ರೇಕ್ ಫಾಸ್ಟ್’ ಹೋಟೆಲ್ನ ನೆಲಮಾಳಿಗೆಯಲ್ಲಿ ಮುಂಜಾನೆ 8:48ರ ಸುಮಾರಿಗೆ…
ಹಾರೋಹಳ್ಳಿ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಹೊರಗುತ್ತಿಗೆ ಸಿಬ್ಬಂದಿಯೊಬ್ಬ ಸಿಕ್ಕಿಬಿದ್ದು, ಸದ್ಯ ಪೊಲೀಸರ ಅತಿಥಿಯಾಗಿರುವ ಗಂಭೀರ ಘಟನೆ ಹಾರೋಹಳ್ಳಿ ತಾಲೂಕಿನ ತೋಕಸಂದ್ರದಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ತೋಕಸಂದ್ರ ಗ್ರಾಮದ ಸುನೀಲ್ (ಶ್ರೀಧರ್) ಎಂದು ಗುರುತಿಸಲಾಗಿದೆ. ಈತ ಕಳೆದ 5 ವರ್ಷಗಳಿಂದ ಇದೇ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತೋಕಸಂದ್ರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು….