Police Roundup

ಬ್ರೇಕಿಂಗ್ ನ್ಯೂಸ್

ದೇಶದ್ರೋಹ ಪ್ರಕರಣ: ಪಾಕ್ ಉಗ್ರನ ಜೊತೆ ಲಿಂಕ್; ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಜಮೀರ್ ಖಾನ್ ಜಂಟಿ ಕಾರ್ಯಾಚರಣೆ ವೇಳೆ ಬಂಧನ!

ತುಮಕೂರು: ತುಮಕೂರಿನಲ್ಲಿ ದಾಖಲಾಗಿದ್ದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆ ಹಾಗೂ ತುಮಕೂರು ಪೊಲೀಸರು ಭರ್ಜರಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಪಾಕಿಸ್ತಾನ ಮೂಲದ ಉಗ್ರನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಆರೋಪಿ, ದಾವಣಗೆರೆಯ ಜಮೀರ್ ಖಾನ್ ಎಂಬಾತನನ್ನು ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಯಶಸ್ವಿಯಾಗಿ ಬಂಧಿಸಲಾಗಿದೆ.   ಬಂಧಿತ ಆರೋಪಿಯನ್ನು ದಾವಣಗೆರೆಯ ಬೀಡಿ ಲೇಔಟ್ ನಿವಾಸಿ ಜಮೀರ್ ಖಾನ್ ಎಂದು ಗುರುತಿಸಲಾಗಿದೆ. ಈತ ವಿವಿಧ ಸಾಮಾಜಿಕ ಜಾಲತಾಣಗಳ (Social Media) ಮೂಲಕ ಪಾಕಿಸ್ತಾನ ಮೂಲದ ಭಯೋತ್ಪಾದಕನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದ ಎನ್ನಲಾಗಿದೆ….

Read More

ಗೆಳೆತನದ ಹೆಸರಲ್ಲಿ ನಂಬಿಕೆ ದ್ರೋಹ: ₹8 ಲಕ್ಷ ವಂಚಿಸಿ ಹಾವೇರಿ ಮೂಲದ ಕಿಲಾಡಿ ಸಮಲ್ ರಾಜ್ ರಾತ್ರೋರಾತ್ರಿ ಪರಾರಿ!

ಜನರ ಮುಗ್ಧತೆ ಹಾಗೂ ಸ್ನೇಹವನ್ನೇ ಬಂಡವಾಳ ಮಾಡಿಕೊಂಡು, ನಂಬಿದ ಗೆಳೆಯನಿಗೇ ಲಕ್ಷಾಂತರ ರೂಪಾಯಿ ನಾಮ ಹಾಕಿ ರಾತ್ರೋರಾತ್ರಿ ಮನೆ ಖಾಲಿ ಮಾಡಿ ವ್ಯಕ್ತಿಯೊಬ್ಬ ಪರಾರಿಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮೂಲತಃ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ನಿವಾಸಿಯಾದ ಸಮಲ್ ರಾಜ್ (ಶ್ಯಾಮಲ ರಾಜ) ಎಂಬಾತನೇ ಈ ವಂಚನೆ ಎಸಗಿ ತಲೆಮರೆಸಿಕೊಂಡಿರುವ ಕಿಲಾಡಿ ವಂಚಕ.   ಆರೋಪಿ ಸಮಲ್ ರಾಜ್‌ನ ವಂಚನೆಯ ಜಾಲ ಅತ್ಯಂತ ವ್ಯವಸ್ಥಿತವಾಗಿದೆ. ಮೇಲ್ನೋಟಕ್ಕೆ ಶ್ರೀಮಂತರ ಹಾಗೂ ಪ್ರಭಾವಿ ವ್ಯಕ್ತಿಗಳೊಂದಿಗೆ ಆತ್ಮೀಯ ಸ್ನೇಹ ಬೆಳೆಸುವ…

Read More

Solverwp- WordPress Theme and Plugin