ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತೀರ್ಪು ಪ್ರಕಟಿಸುವಲ್ಲಿ ಆಗುತ್ತಿದ್ದ ದೀರ್ಘಾವಧಿಯ ವಿಳಂಬಕ್ಕೆ ಕಡಿವಾಣ ಹಾಕಲು ಭಾರತದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂಕೋರ್ಟ್ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ಆದೇಶವೊಂದನ್ನು ಹೊರಡಿಸಿದೆ. ಇನ್ನು ಮುಂದೆ ಯಾವುದೇ ಪ್ರಕರಣದಲ್ಲಿ ವಾದ-ಪ್ರತಿವಾದ ಪೂರ್ಣಗೊಂಡು ಆದೇಶ ಕಾಯ್ದಿರಿಸಿದ ನಂತರ, ದೇಶದ ಎಲ್ಲಾ ಹೈಕೋರ್ಟ್ಗಳು ಗರಿಷ್ಠ 3 ತಿಂಗಳೊಳಗೆ ಅಂತಿಮ ತೀರ್ಪನ್ನು ಪ್ರಕಟಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಕಡಕ್ ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಈ…
ರಕ್ತಚರಿತ್ರೆ, ಗನ್ ಕಲ್ಚರ್ ಹಾಗೂ ದಶಕಗಳ ಭೀಕರ ಹಗೆತನಕ್ಕೆ ಸಾಕ್ಷಿಯಾಗಿದ್ದ ಬೀಮಾತೀರದಲ್ಲಿ ಸದ್ಯ ಶಾಂತಿ ನೆಲೆಸಿದೆ ಎನ್ನುವಷ್ಟರಲ್ಲೇ, ಭೂಗತ ಜಗತ್ತಿನಲ್ಲಿ ಹೊಸದೊಂದು ಹೆಸರಿನ ಅಬ್ಬರ ಜೋರಾಗಿ ಕೇಳಿಬರುತ್ತಿದೆ. ಹಳೇ ಡಾನ್ಗಳ ಸಾಮ್ರಾಜ್ಯ ಪತನಗೊಳ್ಳುತ್ತಿದ್ದಂತೆ, ಬೀಮಾ ನದಿಯ ಒಡಲಿನಲ್ಲಿ ತನ್ನದೇ ಆದ ಕರಾಳ ಪ್ರಭಾವ ಮೂಡಿಸಲು ಹೊಸ ಚಹರೆಯೊಂದು ಹವಣಿಸುತ್ತಿದೆ. ಆ ಹೆಸರೇ ಪಿಂಟ್ಯಾ ಅಗರ್ಖೇಡ್ ಅಲಿಯಾಸ್ ಪ್ರಕಾಶ್ ಮೇಲಿನಕೇರಿ. ಭೂಗತ ಲೋಕದಲ್ಲಿ ಸೃಷ್ಟಿಯಾಗಿರುವ ರಾಜಬೀದಿಗೆ ಲಗ್ಗೆ ಇಡಲು ಸಜ್ಜಾಗುತ್ತಿರುವ ಈ ಹೊಸ ಆಸಾಮಿಯ ಕುರಿತು ‘ಅರಕ್ಷಕರ ಟೈಮ್ಸ್…