ಮಥುರಾ: ಕಲಿಯುಗದಲ್ಲೂ ಶ್ರವಣಕುಮಾರನನ್ನು ನೆನಪಿಸುವ ಅಪರೂಪದ ಘಟನೆಯೊಂದು ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. 90 ವರ್ಷದ ವಯೋವೃದ್ಧ ಅತ್ತೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಹರ್ಯಾಣ ಮೂಲದ ಗಾಯಕಿಯೊಬ್ಬರು ಸುಮಾರು 260 ಕಿಲೋಮೀಟರ್ ಉದ್ದದ ’84 ಕೋಸ್ ಬ್ರಿಜ್ ಪರಿಕ್ರಮ’ ತೀರ್ಥಯಾತ್ರೆ ಪೂರ್ಣಗೊಳಿಸುವ ಮೂಲಕ ಆಧುನಿಕ ಜಗತ್ತಿಗೆ ಆದರ್ಶಪ್ರಾಯರಾಗಿದ್ದಾರೆ. ಹರ್ಯಾಣದ ಪ್ರಸಿದ್ಧ ಗಾಯಕಿ ಕಾಜಲ್ ಚೌಧರಿ ಈ ಭಕ್ತಿ ಮತ್ತು ಕರ್ತವ್ಯದ ಮಹತ್ಕಾರ್ಯವನ್ನು ಮಾಡಿದ ಸೊಸೆಯಾಗಿದ್ದಾರೆ. ಬ್ರಜ್ ಪ್ರದೇಶದ ಪವಿತ್ರ ಧಾರ್ಮಿಕ ಪ್ರದಕ್ಷಿಣೆಯಾದ ’84 ಕೋಸ್ ಬ್ರಿಜ್…
ಆಗ್ರಾ: ರೈಲಿನಲ್ಲಿ ಟಿಕೆಟ್ ಕೇಳಿದ ಟಿಟಿಇಗೆ ಪ್ರಯಾಣಿಕನೊಬ್ಬ ಶಾಕ್ ನೀಡಿದ ವಿಲಕ್ಷಣ ಘಟನೆಯೊಂದು ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಟಿಕೆಟ್ ಕೇಳಿದ್ದಕ್ಕೆ ಪ್ರಯಾಣಿಕನೊಬ್ಬ ಟಿಟಿಇಯನ್ನು ನೇರವಾಗಿ ಶೌಚಾಲಯಕ್ಕೆ ಕರೆದೊಯ್ದು ಒದ್ದೆಯಾಗಿದ್ದ ಟಿಕೆಟ್ ತೋರಿಸಿದ್ದು, ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ರೈಲ್ವೇ ಸುರಕ್ಷತಾ ಪಡೆ (RPF) ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೇ ಇಲಾಖೆಯು ರೈಲುಗಳಲ್ಲಿ ವಿಶೇಷ ಟಿಕೆಟ್ ತಪಾಸಣಾ ಅಭಿಯಾನ ಹಮ್ಮಿಕೊಂಡಿದೆ….