ವಿಶೇಷ ವರದಿ: “ನಾವು ಶಾಲಾ-ಕಾಲೇಜುಗಳಲ್ಲಿ ಓದುವ ದಿನಗಳಲ್ಲಿ ಬಿ.ಸಿ.ಜಿ (BCG), ದಡಾರ, ಪೋಲಿಯೋ ವ್ಯಾಕ್ಸಿನ್ ಕೊಡುತ್ತಿದ್ದರು. ಆದರೆ ಕಾಲ ಬದಲಾಗಿದೆ… ಯುವ ಪೀಳಿಗೆ ಆಧುನಿಕತೆಯತ್ತ ಮುಖ ಮಾಡಿದ್ದರೂ, ರೋಗಗಳ ಸ್ವರೂಪವೂ ಬದಲಾಗಿದೆ!” – ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಕವಿ ಸಿದ್ದಲಿಂಗಯ್ಯನವರ “ಯಾರಿಗೆ ಬಂತು, ಎಲ್ಲಿಗೆ ಬಂತು ’47ರ ಸ್ವಾತಂತ್ರ್ಯ?” ಎಂಬ ಸಾಲುಗಳು ನೆನಪಾಗುವಂತಿದೆ. ರಾಜ್ಯದಲ್ಲಿ ದಿನೇ ದಿನೇ ಯುವಜನತೆಯಲ್ಲಿ ಹೆಚ್ಐವಿ (HIV) ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯು ಪದವಿ (Degree) ಹಾಗೂ ಎಂಜಿನಿಯರಿಂಗ್ (Engineering)…
ಯಾದಗಿರಿ: ನಗರದ ಪ್ರಮುಖ ಸಾರಿಗೆ ಕೇಂದ್ರವಾದ ಯಾದಗಿರಿ ಕೇಂದ್ರ ಬಸ್ ನಿಲ್ದಾಣವು ಇದೀಗ ದನ-ಕರುಗಳ ತಾಣವಾಗಿ ಮಾರ್ಪಟ್ಟಿದ್ದು, ಅಧಿಕಾರಿಗಳ ಘೋರ ನಿರ್ಲಕ್ಷ್ಯಕ್ಕೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಸಾವಿರಾರು ಸಾರ್ವಜನಿಕರು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸಂಚರಿಸುವ ಈ ನಿಲ್ದಾಣದ ಆವರಣದಲ್ಲಿ ಜಾನುವಾರುಗಳು ಮುಕ್ತವಾಗಿ ಅಡ್ಡಾಡುತ್ತಿವೆ. ಬಸ್ ನಿಲ್ದಾಣದ ಒಳಗೆ ಹಾಗೂ ಪ್ಲಾಟ್ಫಾರ್ಮ್ಗಳ ಬಳಿ ಧನಗಳು ನಿರ್ಭಯವಾಗಿ ಓಡಾಡುತ್ತಿರುವುದರಿಂದ ಪ್ರಯಾಣಿಕರು ಭಯದ ವಾತಾವರಣದಲ್ಲೇ ಪ್ರಯಾಣಿಸುವಂತಾಗಿದೆ. ಅಲ್ಲದೆ, ಧನಗಳು ದಿಢೀರನೆ ಬಸ್ಗಳ ಅಡ್ಡ ಬರುವುದರಿಂದ ದೊಡ್ಡ…