“ಹೆತ್ತ ಕರುಳನ್ನು ಕಳೆದುಕೊಂಡ ನೋವು ಜಗತ್ತಿನ ಯಾವುದೇ ತಾಯಿಗೂ ಭರಿಸಲಾಗದಂತದ್ದು.” ಆದರೆ, ಆ ವೈಯಕ್ತಿಕ ದುಃಖದ ಕಣ್ಣೀರಿನಲ್ಲೇ ಮುಳುಗಿಹೋಗದೆ, ತನ್ನ ನೋವನ್ನು ಸಮಾಜದ ಒಳಿತಿಗಾಗಿ ಧಾರೆ ಎರೆದ 50 ವರ್ಷದ ಮಹಿಳೆಯೊಬ್ಬರ ಕಥೆ ಇಂದು ಇಡೀ ಸಮಾಜಕ್ಕೆ ಮಾದರಿಯಾಗಿದೆ. ತನ್ನ ಎಳೆಯ ಮಗನನ್ನು ಕಳೆದುಕೊಂಡ ಈ ಮಾತೆ, ಇಂದು ಇಡೀ ಗ್ರಾಮದ ನೂರಾರು ಬಡ ಮಕ್ಕಳಿಗೆ ತಾಯಿಯಾಗಿದ್ದಾರೆ. ತನ್ನ ಮಗನ ಅಗಲಿಕೆಯ ನಂತರ ಶೂನ್ಯವಾಗಿದ್ದ ಜೀವನದಲ್ಲಿ ಈ ಮಹಿಳೆ ಧೃತಿಗೆಡಲಿಲ್ಲ. ತನ್ನ ಮಗನ ನೆನಪನ್ನು ಅಮರವಾಗಿಸಲು…
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭೀಕರ ಘಟನೆಯೊಂದು ಬೆಳಕಿಗೆ ಬಂದಿದ್ದು, ವಿವಾಹಿತ ಗೃಹಿಣಿಯೊಬ್ಬರು ತಮ್ಮ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರ ಪೋಷಕರು ಇದು ಆತ್ಮಹತ್ಯೆಯಲ್ಲ, ಪತಿಯೇ ನಡೆಸಿರುವ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮೃತ ಗೃಹಿಣಿಯನ್ನು ಹುಣಸೂರು ಪುರಸಭೆಯ ಮಾಜಿ ಅಧ್ಯಕ್ಷೆ ಗೀತಾ ನಿಂಗರಾಜು ಅವರ ಪುತ್ರಿ ಸಂಧ್ಯಾ (30) ಎಂದು ಗುರುತಿಸಲಾಗಿದೆ. ಸದ್ಯ ಮೈಸೂರಿನ ಸರಸ್ವತಿಪುರಂನ ಜವರೇಗೌಡ ಪಾರ್ಕ್ ಸಮೀಪದ ನಿವಾಸದಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದೆ. ಕೆಲವು…