ಭದ್ರಾವತಿ: ಮಗಳ ಮದುವೆಗಾಗಿ ಪಡೆದ ಕೈಸಾಲ ತೀರಿಸಲಾಗದೆ, ಸಾಲಗಾರರ ಮಾನಸಿಕ ಹಿಂಸೆಯಿಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿಯ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಆರೋಪಿಗಳಾದ ದಂಪತಿಗೆ 10 ವರ್ಷಗಳ ಕಠಿಣ ಕಾರಾಗೃಹವಾಸ ಹಾಗೂ ತಲಾ 2 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಭದ್ರಾವತಿ ತಾಲೂಕಿನ ಬಂಡಾರಹಳ್ಳಿ ಗ್ರಾಮದ ಮಹದೇವ (56) ಮತ್ತು ಯಶೋದ (48) ಎಂಬುವವರಿಂದ ರಾಮಚಂದ್ರ ಅವರು ಸುಮಾರು 10 ವರ್ಷಗಳ ಹಿಂದೆ ತಮ್ಮ ಮಗಳ ಮದುವೆಗಾಗಿ ಕೈಸಾಲ…
ಬೆಂಗಳೂರು: ನಗರದ ಲಗ್ಗೆರೆ ವ್ಯಾಪ್ತಿಯಲ್ಲಿ ಪಾರಿವಾಳ ಸಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿ, ಯುವಕನೊಬ್ಬ ಭೀಕರವಾಗಿ ಕೊಲೆಯಾದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಲಗ್ಗೆರೆ ನಿವಾಸಿ ಮಲ್ಲಿಕಾರ್ಜುನ್ (24) ಕೊಲೆಯಾದ ದುರ್ದೈವಿ. ಮೃತ ಮಲ್ಲಿಕಾರ್ಜುನ್ನ ಸ್ನೇಹಿತನೊಬ್ಬ ಪಾರಿವಾಳಗಳನ್ನು ಸಾಕಿದ್ದ ಎನ್ನಲಾಗಿದೆ. ಈ ಪಾರಿವಾಳಗಳನ್ನು ಮಲ್ಲಿಕಾರ್ಜುನ್ ಮತ್ತು ಆತನ ಇತರ ಸ್ನೇಹಿತರು ತೆಗೆದುಕೊಂಡು ಹೋಗಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಸ್ನೇಹಿತರ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. …