ರಾಮದುರ್ಗ/ಬೆಳಗಾವಿ: ಸಂತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳರ ಜಾಲವನ್ನು ಬೇಧಿಸುವಲ್ಲಿ ಕಟಕೋಳ ಪೊಲೀಸ್ ಠಾಣೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ 40 ಮೊಬೈಲ್ ಫೋನ್ಗಳು ಹಾಗೂ 2 ಕಾರುಗಳನ್ನು ಜಪ್ತಿ ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ
ದಿನಾಂಕ 23/05/2026 ರಂದು ಸಾಲಹಳ್ಳಿ ಗ್ರಾಮದ ಕಾಯಿಪಲ್ಲೆ ಸಂತೆಗೆ ತೆರಳಿದ್ದ ಬಿಜಗುಪ್ಪಿ ಗ್ರಾಮದ ಸಹ ಶಿಕ್ಷಕ ನೀಲಪ್ಪ ಸಣ್ಣತಮ್ಮಪ್ಪ ಸಕ್ರಿ (48) ಅವರ 21,000 ರೂ. ಮೌಲ್ಯದ ವಿಯೋ (Vivo) ಕಂಪನಿಯ ಮೊಬೈಲ್ ಫೋನ್ ಕಳುವಾಗಿತ್ತು. ಈ ಕುರಿತು ಅವರು ನೀಡಿದ ದೂರಿನನ್ವಯ ಕಟಕೋಳ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 99/2026, ಕಲಂ: 303(2) ಹಾಗೂ 112 ಬಿ.ಎನ್.ಎಸ್-2023 ರಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ಪೊಲೀಸ್ ತಂಡದ ಕಾರ್ಯಾಚರಣೆ
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶ್ರೀ ಕೆ. ರಾಮರಾಜನ್ IPS ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್.ಪಿ ಆರ್. ಬಿ. ಬಸರಗಿ, ರಾಮದುರ್ಗ ಡಿಎಸ್ಪಿ ಚಿದಂಬರ ಮಡಿವಾಳ ಹಾಗೂ ಸಿಪಿಐ ವಿನಾಯಕ ಬಡಿಗೇರ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಕಟಕೋಳ ಠಾಣೆ ಪಿಎಸ್ಐ ಬಸವರಾಜ ಕೊಣ್ಣೂರೆ, ಪ್ರೊಬೆಷನರಿ ಪಿಎಸ್ಐ ಅನ್ನಪೂರ್ಣ ಎಲ್. ಹಾಗೂ ಠಾಣೆಯ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ಒಳಗೊಂಡ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಗಳ ವಿವರ:
ವಿಕಾಸ ವೆಂಕಟೇಶ ಭೋವಿ (ಭೋವಿ ಕಾಲನಿ, ಭದ್ರಾವತಿ, ಶಿವಮೊಗ್ಗ)
ಕುಮಾರ ಪಾಪಣ್ಣಾ ಭೋವಿ (01ನೇ ಕ್ರಾಸ್, ಭದ್ರಾವತಿ, ಶಿವಮೊಗ್ಗ)
ಪ್ರವೀಣ ಮಂಜಪ್ಪ ಭೋವಿ (05ನೇ ಕ್ರಾಸ್, ಭದ್ರಾವತಿ, ಶಿವಮೊಗ್ಗ)
ಸಂತೋಷ ಗವಿಸ್ವಾಮಿ ಕುಂಡಾ (01ನೇ ಕ್ರಾಸ್, ಭದ್ರಾವತಿ, ಶಿವಮೊಗ್ಗ)
ಶಿವು ಯಲ್ಲಪ್ಪ ಭೋವಿ (02ನೇ ಕ್ರಾಸ್, ಭದ್ರಾವತಿ, ಶಿವಮೊಗ್ಗ)
ವೆಂಕಟೇಶ ಈರಪ್ಪ ಭೋವಿ (05ನೇ ಕ್ರಾಸ್, ಭದ್ರಾವತಿ, ಶಿವಮೊಗ್ಗ)
ಅಕ್ಷಯ ಗಣೇಶ ಎ.ಜಿ (ಅನಂತಪುರ ಗಣೇಶ) (ಹಾಲದಮ್ಮ ಬೀದಿ, ಭದ್ರಾವತಿ, ಶಿವಮೊಗ್ಗ)
ಸಚೀನ ಲಕ್ಷ್ಮಣ ಕಲ್ಲವಡ್ಡರ (ಗೋಕುಲ ರೋಡ್, ಹುಬ್ಬಳ್ಳಿ, ಧಾರವಾಡ)
10.34 ಲಕ್ಷ ಮೌಲ್ಯದ ಸೊತ್ತು ಜಪ್ತಿ
ಬಂಧಿತ ಆರೋಪಿಗಳಿಂದ ಪೊಲೀಸರು 4,94,200 ರೂ. ಮೌಲ್ಯದ ವಿವಿಧ ಕಂಪನಿಗಳ ಒಟ್ಟು 40 ಮೊಬೈಲ್ ಫೋನ್ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 5,40,000 ರೂ. ಮೌಲ್ಯದ ಎರಡು ಕಾರುಗಳು ಸೇರಿದಂತೆ ಒಟ್ಟು 10,34,200 ರೂಪಾಯಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ತಂಡದ ಈ ತ್ವರಿತ ಕಾರ್ಯಾಚರಣೆಗೆ ಮತ್ತು ಯಶಸ್ವಿ ತನಿಖೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.