ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನೆಗಾಗಿ ದಾನವಾಗಿ ಬರುವ ಮೃತದೇಹಗಳ (ಶವಗಳ) ಖಾಸಗಿ ಅಂಗಗಳ ಬಗ್ಗೆ ಕಾಮಿಡಿ ಶೋ ಒಂದರಲ್ಲಿ ಅತ್ಯಂತ ವಿವಾದಾತ್ಮಕ ಹಾಗೂ ಅವಹೇಳನಕಾರಿ ಕಾಮೆಂಟ್ ಮಾಡಿ ಭಾರಿ ಸಾರ್ವಜನಿಕ ಆಕ್ರೋಶಕ್ಕೆ ಈಡಾಗಿದ್ದ ಮುಂಬೈನ ಪ್ರಸಿದ್ಧ ಕೆಇಎಂ (KEM) ಆಸ್ಪತ್ರೆಯ ವೈದ್ಯೆ ಸೇಜಲ್ ಪವಾರ್ ಕೊನೆಗೂ ಮಣಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಹಾಸ್ಯನಟ ಪ್ರಣೀತ್ ಮೋರೆ ಅವರ ಸ್ಟ್ಯಾಂಡ್ ಅಪ್ ಕಾಮಿಡಿ ಶೋ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ…
ಸಾರ್ವಜನಿಕರ ತೆರಿಗೆ ಹಣ ಹಾಗೂ ರಸ್ತೆಗಳ ದುರಸ್ತಿಗೆ ಬಳಕೆಯಾಗಬೇಕಿದ್ದ ಕೋಟ್ಯಂತರ ರೂಪಾಯಿ ಹಣ ಅಧಿಕಾರಿಗಳ ಸ್ವಾರ್ಥಕ್ಕೆ ಬಲಿಯಾಗುತ್ತಿರುವುದಕ್ಕೆ ಜೀವಂತ ಸಾಕ್ಷಿಯೊಂದು ಹೈದರಾಬಾದ್ನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ರಸ್ತೆ ಮತ್ತು ಕಟ್ಟಡಗಳ ಇಲಾಖೆಯ (R&B) ಚೀಫ್ ಎಂಜಿನಿಯರ್ ಒಬ್ಬರ ಮನೆಯ ಮೇಲೆ ನಡೆದ ದಾಳಿಯಲ್ಲಿ ಪತ್ತೆಯಾಗಿರುವ ಸಂಪತ್ತಿನ ರಾಶಿ ಇಡೀ ದೇಶವೇ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಸಂಬಂಧಪಟ್ಟ ತನಿಖಾ ಸಂಸ್ಥೆಗಳು ನಡೆಸಿದ ಈ ಆಕಸ್ಮಿಕ ದಾಳಿಯಲ್ಲಿ ಕಂತೆ ಕಂತೆ ನೋಟುಗಳ ರಾಶಿ, ಕೆಜಿಗಟ್ಟಲೆ ಚಿನ್ನದ ಒಡವೆಗಳು…