ಮಡಿಕೇರಿ: ಬದುಕು ಒಮ್ಮೊಮ್ಮೆ ಅತ್ಯಂತ ಕ್ರೂರವಾಗಿ ನಡೆದುಕೊಳ್ಳುತ್ತದೆ ಎಂಬುದಕ್ಕೆ ಕೊಡಗಿನ ಪ್ರಸಿದ್ಧ ದುಬಾರೆ ಆನೆ ಕ್ಯಾಂಪ್ನಲ್ಲಿ ನಡೆದ ಭೀಕರ ದುರಂತವೇ ಸಾಕ್ಷಿ. ಆನೆಗಳ ಕಾದಾಟದ ನಡುವೆ ಸಿಲುಕಿ ಕಣ್ಣೆದುರೇ ಪ್ರೀತಿಯ ಪತ್ನಿ ಕೊನೆಯುಸಿರೆಳೆದಾಗ ಆ ಪತಿ ಅನುಭವಿಸಿದ ನರಕಯಾತನೆ ಅಷ್ಟಿಷ್ಟಲ್ಲ. ಆದರೆ, ಅಂತಹ ಧೃತಿಗೆಡಿಸುವ ಕಗ್ಗತ್ತಲ ಸನ್ನಿವೇಶದಲ್ಲೂ ಪತಿ ಜೋಯೆಲ್ ಅವರು ಮಾನವೀಯತೆಯ ಮಹಾ ಬೆಳಕೊಂದನ್ನು ಜಗತ್ತಿಗೆ ತೋರಿಸುವ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ದುಬಾರೆ ದುರಂತದಲ್ಲಿ ಪತ್ನಿ ತುಳಸಿ ಅವರನ್ನು ಕಳೆದುಕೊಂಡ ತೀವ್ರ ಆಘಾತದ ನಡುವೆಯೂ,…
ಬೆಂಗಳೂರು: ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿರುವ ಮಾಧ್ಯಮ ರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಪತ್ರಕರ್ತರನ್ನು ಮಾನ್ಯತೆ ಹೊಂದಿರುವವರು-ಹೊಂದಿಲ್ಲದವರು, ಅಸಲಿ-ನಕಲಿ ಹಾಗೂ ಸ್ವತಂತ್ರ-ವೃತ್ತಿನಿರತ ಎಂದು ವರ್ಗೀಕರಿಸಿ ತಾರತಮ್ಯ ಮಾಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಆಲ್ ಇಂಡಿಯಾ ನ್ಯೂಸ್ ಅಕಾಡೆಮಿಯ ಅಧ್ಯಕ್ಷರಾದ ತ್ಯಾಗರಾಜ್ ವಿ. ಎಸ್. ಅವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಮಾಧ್ಯಮ ಧರ್ಮವನ್ನು ಪಾಲಿಸುವ ಮತ್ತು ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸುವ ಪ್ರತಿಯೊಬ್ಬರನ್ನೂ ಸಮಾನವಾಗಿ ‘ಪತ್ರಕರ್ತ’ ಎಂದೇ ಪರಿಗಣಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. …