ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮನೆ ಲೀಸ್ ಹಾಗೂ ಬಾಡಿಗೆ ಹೆಸರಿನಲ್ಲಿ ಬರೋಬ್ಬರಿ 200 ಕೋಟಿ ರೂಪಾಯಿ ವಂಚಿಸಿ ಸಾರ್ವಜನಿಕರಿಗೆ ನಾಮ ಹಾಕಿದ್ದ ‘ಜಾನ್ಸ್ ಅಸೆಟ್ ಮ್ಯಾನೇಜ್ಮೆಂಟ್’ (John’s Asset Management) ಕಂಪನಿಯ ಮಾಲೀಕ ಸ್ಟೀಫನ್ ಜಾನ್ ಕೋಟ್ಯಂತರ ರೂಪಾಯಿ ಹಣದೊಂದಿಗೆ ಪರಾರಿಯಾಗಿದ್ದಾನೆ. ಸದ್ಯ ವಂಚನೆಗೊಳಗಾದ ಗ್ರಾಹಕರು ನೀಡಿದ ದೂರಿನನ್ವಯ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ತೀವ್ರ ಜಾಲ ಬೀಸಿದ್ದಾರೆ. ಬೆಂಗಳೂರಿನಲ್ಲಿ ಮನೆಗಳಿಗಿರುವ ಅತಿಯಾದ ಬೇಡಿಕೆಯನ್ನೇ ಬಂಡವಾಳ ಮಾಡಿಕೊಂಡಿದ್ದ ಈ ವಂಚಕ…
ಮಲ್ಕಾನ್ಗಿರಿ (ಒಡಿಶಾ): ವೈದ್ಯರನ್ನು ಸಮಾಜದಲ್ಲಿ ‘ನಡೆದಾಡುವ ದೇವರು’ ಎಂದು ಪೂಜಿಸುವುದಕ್ಕೆ ಅತ್ಯಂತ ಜ್ವಲಂತ ಮತ್ತು ಹೃದಯಸ್ಪರ್ಶಿ ಉದಾಹರಣೆಯೊಂದು ಒಡಿಶಾದಿಂದ ಬೆಳಕಿಗೆ ಬಂದಿದೆ. ಹವಾನಿಯಂತ್ರಿತ ಕೊಠಡಿಗಳ ಐಷಾರಾಮಿ ಜೀವನವನ್ನು ಬದಿಗೊತ್ತಿ, ದುರ್ಗಮ ಗುಡ್ಡಗಾಡು ಪ್ರದೇಶದ ಗರ್ಭಿಣಿಯೊಬ್ಬರ ಪ್ರಾಣ ಉಳಿಸಲು ಬರೋಬ್ಬರಿ 10 ಕಿಲೋಮೀಟರ್ ದೂರ ಮಂಚ ಹೊತ್ತು ನಡೆದ ಒಡಿಶಾದ ಮಲ್ಕಾನ್ಗಿರಿಯ ‘ಜಂಗಲ್ ಡಾಕ್ಟರ್’ ಎಂದೇ ಪ್ರಖ್ಯಾತರಾದ ಡಾ. ಓಂಕಾರ್ ಹೋತಾ ಅವರ ನಿಸ್ವಾರ್ಥ ಸೇವೆ ಇಂದು ಇಡೀ ದೇಶಕ್ಕೆ ಮಾದರಿಯಾಗಿದೆ. 2017ರಲ್ಲಿ ನಡೆದ ಈ ಅವಿಸ್ಮರಣೀಯ…