ಬೆಂಗಳೂರು: ನಾವು ತೋರುವ ಸಣ್ಣ ಪ್ರೀತಿ, ಕರುಣೆ ಮತ್ತು ಮಾನವೀಯತೆ ಮತ್ತೊಬ್ಬರ ಜೀವನದಲ್ಲಿ ದೊಡ್ಡ ಆಶಾಕಿರಣವಾಗಬಹುದು ಎಂಬುದಕ್ಕೆ ಬೆಂಗಳೂರಿನ ಮಹಿಳೆಯೊಬ್ಬರು ಜೀವಂತ ಉದಾಹರಣೆಯಾಗಿದ್ದಾರೆ. ಪ್ರತಿದಿನ ನಗರದ ಸ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರ ದಣಿವನ್ನು ಪ್ರೀತಿಯಿಂದ ನೀಡುವ ಚಹಾ, ಕಾಫಿ ಹಾಗೂ ಬಿಸ್ಕೆಟ್ಗಳ ಮೂಲಕ ನೀಗಿಸುತ್ತಿರುವ ಈ ಮಹಿಳೆಯ ಸೇವೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾನ್ಯವಾಗಿ ಪೌರ ಕಾರ್ಮಿಕರು ಕಸ ಸಂಗ್ರಹಿಸಲು ಬರುವ ಸಮಯಕ್ಕಾಗಿ ಕಾಯುವವರೇ ಹೆಚ್ಚು. ಆದರೆ ಈ ಮಹಿಳೆ ಮಾತ್ರ…
ಮೈಸೂರು: ಜಮೀನಿನಲ್ಲಿ ಕಳೆ ಕೀಳುವ ಕೆಲಸದಲ್ಲಿ ನಿರತರಾಗಿದ್ದ ವೃದ್ಧ ಮಹಿಳೆಯೊಬ್ಬರು ಏಕಾಏಕಿ ಸಿಡಿಲು ಬಡಿದು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹೊಸಪುರ ಗ್ರಾಮದಲ್ಲಿ ನಡೆದಿದೆ. ಹೊಸಪುರ ಗ್ರಾಮದ ನಿವಾಸಿ ಯಶೋದಮ್ಮ (65) ಸಿಡಿಲು ಬಡಿತಕ್ಕೆ ತುತ್ತಾಗಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಯಶೋದಮ್ಮ ಅವರು ಗ್ರಾಮದ ಬಸಪ್ಪ ಎಂಬುವರಿಗೆ ಸೇರಿದ ಜಮೀನಿನಲ್ಲಿ ಬೀನ್ಸ್ ಬೆಳೆಯ ಕಳೆ ಕೀಳುವ ಕೆಲಸಕ್ಕಾಗಿ ಇತರ ಐದು ಮಂದಿ ಮಹಿಳೆಯರೊಂದಿಗೆ ತೆರಳಿದ್ದರು. ಒಟ್ಟು ಆರು ಜನ ಮಹಿಳೆಯರು ಜಮೀನಿನಲ್ಲಿ…