ಕೋಲ್ಕತ್ತಾ: ರಾಜಕೀಯ ಅಂದರೆ ಕೇವಲ ಹಣವಂತರು ಅಥವಾ ಪ್ರಭಾವಿಗಳ ಅಖಾಡ ಎಂಬ ಕಾಲವೊಂದಿತ್ತು. ಆದರೆ, ಪಶ್ಚಿಮ ಬಂಗಾಳದಲ್ಲಿ ಸಾಮಾನ್ಯ ಮನೆಗೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಇಂದು ಶಾಸಕಿಯಾಗಿ ಆಯ್ಕೆಯಾಗುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ಅವರೇ ಬಿಜೆಪಿಯ ಕಲಿತಾ ಮಾಝಿ. ₹3000 ಸಂಬಳಕ್ಕೆ ಮನೆಗೆಲಸ: ಕೆಲವೇ ದಿನಗಳ ಹಿಂದಿನವರೆಗೂ ಕಲಿತಾ ಮಾಝಿ ಅವರ ಬದುಕು ಅತ್ಯಂತ ಕಷ್ಟಕರವಾಗಿತ್ತು. ಪರರ ಮನೆಗಳಿಗೆ ಹೋಗಿ ಪಾತ್ರೆ ತೊಳೆಯುವುದು, ಕಸ ಬಳಿಯುವ ಕೆಲಸ ಮಾಡುತ್ತಿದ್ದ ಇವರಿಗೆ ತಿಂಗಳಿಗೆ ಸಿಗುತ್ತಿದ್ದ ಸಂಬಳ ಕೇವಲ…
ಬೆಳಗಾವಿ: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ತಾವು ಮಂಚೂಣಿಯಲ್ಲಿರುವುದನ್ನು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಗೋಟೂರು ರಾಜ್ಯ ರಸ್ತೆಯ ದುಸ್ಥಿತಿಯ ಬಗ್ಗೆ ನೀಡಿದ್ದ ಭರವಸೆಯನ್ನು ಕೇವಲ ನಾಲ್ಕೇ ದಿನಗಳಲ್ಲಿ ಈಡೇರಿಸುವ ಮೂಲಕ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಗೋಟೂರು ರಾಜ್ಯ ರಸ್ತೆಯು ಬೃಹತ್ ಗಾತ್ರದ ಹೊಂಡಗಳಿಂದ ತುಂಬಿ ಹೋಗಿತ್ತು. ಇದರಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಸಂಚರಿಸಲು ಹರಸಾಹಸ ಪಡುತ್ತಿದ್ದರು. ಅಪಘಾತಗಳ ತಾಣವಾಗಿದ್ದ ಈ ರಸ್ತೆಯನ್ನು ಸರಿಪಡಿಸುವಂತೆ ಇತ್ತೀಚೆಗೆ ಸಾರ್ವಜನಿಕರು ಸಂಸದರಿಗೆ ಮನವಿ…