Police Roundup

ರಾಷ್ಟ್ರೀಯ ಸುದ್ದಿ

ಸಾಫ್ಟ್‌ವೇರ್ ಇಂಜಿನಿಯರ್ ಪತಿಯ ವರದಕ್ಷಿಣೆ ದಾಹಕ್ಕೆ ನವವಧು ಬಲಿ: ಮದುವೆಯಾದ ಎರಡೇ ತಿಂಗಳಿಗೆ ನೂರಾರು ಕನಸು ಭಸ್ಮ!

ವಿಶಾಖಪಟ್ಟಣಂ: ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗು ಮತ್ತೊಂದು ಅಮಾಯಕ ಜೀವವನ್ನು ಬಲಿಪಡೆದಿದೆ. ಕೈತುಂಬಾ ಸಂಬಳ ಪಡೆಯುವ ಸಾಫ್ಟ್‌ವೇರ್ ಇಂಜಿನಿಯರ್ ಪತಿಯ ವರದಕ್ಷಿಣೆ ಹಪಾಹಪಿ ಮತ್ತು ಕಿರುಕುಳಕ್ಕೆ ಸಿಲುಕಿ ತೇಜಶ್ರೀ ಎಂಬ ಯುವತಿ ವಿವಾಹವಾದ ಕೇವಲ ಎರಡೇ ತಿಂಗಳಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದಿದೆ.   ಮೃತ ತೇಜಶ್ರೀ ಅವರ ವಿವಾಹ ಸೋಮೇಶ್ ಎಂಬ ಸಾಫ್ಟ್‌ವೇರ್ ಇಂಜಿನಿಯರ್ ಜೊತೆ ಅದ್ಧೂರಿಯಾಗಿ ನಡೆದಿತ್ತು. ಮದುವೆಯ ಸಮಯದಲ್ಲಿ ತೇಜಶ್ರೀ ಪೋಷಕರು ತಮ್ಮ ಶಕ್ತಿ ಮೀರಿ 20…

Read More

ಕೇವಲ ಒಂದು ನಿಂಬೆ ಹಣ್ಣಿಗಾಗಿ ಬಾಲಕನ ಬರ್ಬರ ಕೊಲೆ: ಬಿಹಾರದಲ್ಲಿ ಮಾಲೀಕನ ಅಟ್ಟಹಾಸ!

ನಳಂದಾ (ಬಿಹಾರ): ಕ್ಷುಲ್ಲಕ ಕಾರಣಕ್ಕೆ ಮನುಷ್ಯ ಎಷ್ಟು ಕ್ರೂರಿಯಾಗಬಲ್ಲ ಎಂಬುದಕ್ಕೆ ಬಿಹಾರದ ನಳಂದಾ ಜಿಲ್ಲೆಯ ಸಕ್ರವಾ ಗ್ರಾಮದಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಾಗಿದೆ. ಕೇವಲ ಒಂದು ನಿಂಬೆ ಹಣ್ಣು ಕಿತ್ತಿದ್ದಕ್ಕಾಗಿ ತೋಟದ ಮಾಲೀಕ ಬಾಲಕನೊಬ್ಬನನ್ನು ಬರ್ಬರವಾಗಿ ಹೊಡೆದು ಕೊಂದಿರುವ ಅಮಾನವೀಯ ಘಟನೆ ನಡೆದಿದೆ.   ವರದಿಗಳ ಪ್ರಕಾರ, ಗ್ರಾಮದ ಬಾಲಕನೊಬ್ಬ ಸ್ಥಳೀಯ ನಿವಾಸಿಯೊಬ್ಬರ ತೋಟಕ್ಕೆ ಹೋಗಿದ್ದಾಗ, ಅಲ್ಲಿ ಗಿಡದಲ್ಲಿದ್ದ ಕೆಲವು ನಿಂಬೆ ಹಣ್ಣುಗಳನ್ನು ಕಿತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ತೋಟದ ಮಾಲೀಕ, ವಿವೇಚನೆ ಕಳೆದುಕೊಂಡು ಬಾಲಕನ ಮೇಲೆ…

Read More

Solverwp- WordPress Theme and Plugin