Police Roundup

ವಿಶೇಷ ವರದಿ

ಉಚಿತ ಬಿಯರ್ ನೀಡದ್ದಕ್ಕೆ ಬಾರ್‌ನಲ್ಲಿ ಪುಡಿ ರೌಡಿಗಳ ಅಟ್ಟಹಾಸ: ಕ್ಯಾಶಿಯರ್ ಮೇಲೆ ಹಲ್ಲೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮಾಲೂರು: ಉಚಿತವಾಗಿ ಬಿಯರ್ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಮುಖಕ್ಕೆ ಮಾಸ್ಕ್ ಧರಿಸಿ ಬಂದ ಪುಡಿ ರೌಡಿಗಳ ಗುಂಪೊಂದು ಬಾರ್‌ಗೆ ನುಗ್ಗಿ ತಡರಾತ್ರಿ ಭೀಕರ ದಾಂದಲೆ ನಡೆಸಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ತೊರಲಕ್ಕಿ ಗ್ರಾಮದಲ್ಲಿ ಸಂಭವಿಸಿದೆ. ​ ತೊರಲಕ್ಕಿ ಗ್ರಾಮದ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಬಂದ ಕಿಡಿಗೇಡಿಗಳ ಗ್ಯಾಂಗ್, ಬಿಯರ್ ಪಾರ್ಸಲ್ ಪಡೆದುಕೊಂಡು ಹಣ ನೀಡದೆ ನಿರ್ಗಮಿಸಲು ಯತ್ನಿಸಿದೆ. ಈ ವೇಳೆ ಬಾರ್ ಸಿಬ್ಬಂದಿ ಹಣ ಕೇಳಿದ್ದಕ್ಕೆ ಉದ್ಧಟತನ ಪ್ರದರ್ಶಿಸಿದ…

Read More

ಹುಂಡಿ ಹಣ ಮುಟ್ಟದೆ ಕೇವಲ ಪೂಜಾ ಸಾಮಗ್ರಿ ಕದಿಯುತ್ತಿದ್ದ ಖದೀಮ; 174 ಕೆ.ಜಿ ಹಿತ್ತಾಳೆ, ತಾಮ್ರದ ವಸ್ತುಗಳು ಜಪ್ತಿ

ಕಾರವಾರ: ಜಿಲ್ಲೆಯಲ್ಲಿ ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಸರಣಿ ಕಳ್ಳತನ ನಡೆಸುತ್ತಿದ್ದ ಖತರ್ನಾಕ್ ಕಳ್ಳನನ್ನು ಬಂಧಿಸುವಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಭರ್ಜರಿ ಯಶಸ್ಸು ಗಳಿಸಿದ್ದಾರೆ. ದೂರು ದಾಖಲಾದ ಕೇವಲ 24 ಗಂಟೆಗಳ ಒಳಗೆ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಲ್ಲದೆ ಲಕ್ಷಾಂತರ ರೂಪಾಯಿ ಮೌಲ್ಯದ ಪೂಜಾ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ​ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಕಾರವಾರದ ಗಿಂಡಿವಾಡ ಮೂಲದ ವಿನಯ ಅಲಿಯಾಸ್ ವಿನಾಯಕ ದಯಾನಂದ ಗಾಂವ್ಕರ್ (40) ಬಂಧಿತ ಆರೋಪಿಯಾಗಿದ್ದಾನೆ.   ಬಂಧಿತ ಆರೋಪಿಯಿಂದ ಅಂದಾಜು 87,000 ರೂ….

Read More

Solverwp- WordPress Theme and Plugin