ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿ ಮಲ್ಲಿಕಾರ್ಜುನ ಅವರ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಬೃಹತ್ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಅಧಿಕಾರಿಗಳ ಶೋಧದ ವೇಳೆ ಸಿಕ್ಕ ಆಸ್ತಿ ವಿವರಗಳನ್ನು ಕಂಡು ತನಿಖಾ ತಂಡವೇ ಬೆಚ್ಚಿಬಿದ್ದಿದೆ. ದಾಳಿಯಲ್ಲಿ ಪತ್ತೆಯಾದ ಆಸ್ತಿ ವಿವರ: ನಗದು: ೨.೫೩ ಕೋಟಿ ರೂಪಾಯಿ ನಗದು ಹಣ. ಬ್ಯಾಂಕ್ ಬ್ಯಾಲೆನ್ಸ್: ವಿವಿಧ ಬ್ಯಾಂಕ್ ಖಾತೆಗಳಲ್ಲಿ ಸುಮಾರು ೧…
ಅಥಣಿ: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ಮೂವರು ಆರೋಪಿಗಳನ್ನು ಅಥಣಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಬೆಳಗಟ್ಟದ ರಾಮಚಂದ್ರಪ್ಪ ಬೊರಯ್ಯ ಪೂಜಾರಿ, ತಂಗಡಿಯ ಪ್ರದೀಪ್ ಲಕ್ಷ್ಮಣ್ ಕಾಂಬಳೆ ಹಾಗೂ ಉಗಾರಖುರ್ದದ ರಾವ್ಸಾಹೇಬ್ ಶ್ರೀಕಾಂತ್ ಪಾಟೀಲ್ ಬಂಧಿತ ಆರೋಪಿಗಳು. ಘಟನೆಯ ವಿವರ: ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕವಿದೆ ಎಂದು ಹೇಳಿಕೊಂಡಿದ್ದ ಆರೋಪಿಗಳು, ದೇವರಡ್ಡೇರಹಟ್ಟಿ ಗ್ರಾಮದ ಸುಭಾಷ್ ಬಸಪ್ಪ ನಾಯಕ್ ಎಂಬುವವರ ಇಬ್ಬರು…