ಕರ್ನಾಟಕ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿ (ರಿ.) ವತಿಯಿಂದ ಬೆಳಗಾವಿಯ ಶ್ರೀ ಮಹೇಶ್ ಎಸ್/o ಮಂಜುನಾಥ್ ಶರ್ಮಾ ಅವರನ್ನು ಸಂಘಟನೆಯ ರಾಜ್ಯ ಮಾಧ್ಯಮ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ. ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಭೀಮಪುತ್ರಿ ನಾಗಮ್ಮ ಅವರು ಈ ನೂತನ ನೇಮಕಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದು, ಮಹೇಶ್ ಶರ್ಮಾ ಅವರ ನಾಯಕತ್ವ ಹಾಗೂ ಸಮಾಜಮುಖಿ ಚಿಂತನೆಗಳು ಸಂಘಟನೆಯ ಧ್ಯೇಯ-ಉದ್ದೇಶಗಳನ್ನು ರಾಜ್ಯದಾದ್ಯಂತ ಪರಿಣಾಮಕಾರಿಯಾಗಿ ತಲುಪಿಸಲು ನೆರವಾಗಲಿ ಎಂದು ಶುಭ ಹಾರೈಸಿದ್ದಾರೆ. ಪರಿಶಿಷ್ಟ…
ಬೆಂಗಳೂರು: ದೈನಂದಿನ ಪ್ರಯಾಣಕ್ಕಾಗಿ ಆನ್ಲೈನ್ ಬೈಕ್ ಟ್ಯಾಕ್ಸಿ ಸೇವೆಯನ್ನು ನೆಚ್ಚಿಕೊಂಡಿದ್ದ ಯುವತಿಯೊಬ್ಬಳು, ಚಾಲಕನ ನಿರ್ಲಕ್ಷ್ಯ ಮತ್ತು ಅತಿಯಾದ ವೇಗದಿಂದಾಗಿ ಭೀಕರ ಅಪಘಾತಕ್ಕೆ ಈಡಾಗಿ ತೀವ್ರವಾಗಿ ಗಾಯಗೊಂಡಿರುವ ದೂಲರ್ಭಾಗ್ಯಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಾಹಿತ್ಯ ಮತ್ತು ಕಲಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದು, ದೊಮ್ಮಲೂರಿನಲ್ಲಿ ಉದ್ಯೋಗದಲ್ಲಿದ್ದ ಸಾನಿಕೃಷ್ಣ ಎಂಬ ಯುವತಿಯೇ ಈ ದುರಂತಕ್ಕೆ ತುತ್ತಾದವರಾಗಿದ್ದಾರೆ. 2026ರ ಜೂನ್ 17ರಂದು ಸಾನಿಕೃಷ್ಣ ಅವರು ಬೈರಸಂದ್ರದಿಂದ ದೊಮ್ಮಲೂರಿಗೆ ತೆರಳಲು ರ್ಯಾಪಿಡೋ (Rapido) ಬೈಕ್ ಬುಕ್ ಮಾಡಿದ್ದರು. ಪ್ರಯಾಣದ ವೇಳೆ ಚಾಲಕ ಅತಿವೇಗವಾಗಿ…