ಬೆಂಗಳೂರು: ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ “ಇದು ನಮ್ಮ ವ್ಯಾಪ್ತಿಗೆ ಬರಲ್ಲ”, “ಮುಂದೆ ನೋಡೋಣ” ಅಥವಾ “ವಿಚಾರಣೆ ಮಾಡಿಯೇ ಕೇಸ್ ದಾಖಲಿಸುತ್ತೇವೆ” ಎಂದು ಕುಂಟು ನೆಪ ಹೇಳುವ ಪೊಲೀಸರಿಗೆ ಸುಪ್ರೀಂ ಕೋರ್ಟ್ ಬಿಸಿ ಮುಟ್ಟಿಸಿದೆ. ಐತಿಹಾಸಿಕ ‘ಲಲಿತಾ ಕುಮಾರಿ’ ಪ್ರಕರಣದ ತೀರ್ಪಿನ ಅನ್ವಯ, ಗಂಭೀರ ಸ್ವರೂಪದ ಅಪರಾಧಗಳ ಮಾಹಿತಿ ಲಭ್ಯವಾದ ಕೂಡಲೇ ಪ್ರಥಮ ಮಾಹಿತಿ ವರದಿ (FIR) ದಾಖಲಿಸುವುದು ಇನ್ಮುಂದೆ ಕಡ್ಡಾಯ. ತನ್ನ ಅಪ್ರಾಪ್ತ ಮಗಳು ಕಿಡ್ನಾಪ್ ಆಗಿದ್ದಾಳೆಂದು ತಂದೆಯೊಬ್ಬರು ದೂರು ನೀಡಿದರೂ ಪೊಲೀಸರು…
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಪೊಲೀಸ್ ವ್ಯವಸ್ಥೆ ಈಗ ಮತ್ತೊಂದು ಅತ್ಯಾಧುನಿಕ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ. ಭಾಷಾ ಸಂವಹನದ ಕೊರತೆಯಿಂದ ತುರ್ತು ಸಂದರ್ಭಗಳಲ್ಲಿ ನೆರವು ಪಡೆಯಲು ನಾಗರಿಕರಿಗೆ ಆಗುತ್ತಿದ್ದ ತೊಂದರೆಯನ್ನು ನೀಗಿಸಲು, ಬೆಂಗಳೂರು ನಗರ ಪೊಲೀಸರು ದೇಶದಲ್ಲೇ ಮೊದಲ ಬಾರಿಗೆ 112 ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್ (ERSS) ನಲ್ಲಿ ಬಹುಭಾಷಾ ಅನುವಾದ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ನಡೆದ ವಿಶೇಷ ಸಮಾರಂಭದಲ್ಲಿ ಈ ನೂತನ ವ್ಯವಸ್ಥೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಯಾವುದೇ…