ಬೆಂಗಳೂರು: ದೇಶದ ಕೃಷಿ ಮತ್ತು ಆರ್ಥಿಕತೆಯ ಜೀವನಾಡಿಯಾಗಿರುವ ಮುಂಗಾರು ಮಾರುತಗಳು (Monsoon) ಈ ಬಾರಿ ನಿಗದಿತ ಸಮಯಕ್ಕಿಂತ ಒಂದು ವಾರ ಮೊದಲೇ ಅಂಡಮಾನ್ ದ್ವೀಪಗಳನ್ನು ಪ್ರವೇಶಿಸಲಿದೆ. ವಾಡಿಕೆಯಂತೆ ಮೇ 22ಕ್ಕೆ ಆರಂಭವಾಗಬೇಕಿದ್ದ ಮಳೆಗಾಲದ ಪ್ರಕ್ರಿಯೆ, ಈ ಬಾರಿ ಮೇ 17ರಂದೇ ಚಾಲನೆ ಪಡೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಬಂಗಾಳದ ಉಪಸಾಗರ, ಅಂಡಮಾನ್ ಸಮುದ್ರ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಿಗೆ ಮುಂಗಾರು ಮಾರುತಗಳು ಈ ವಾರದ ಕೊನೆಯಲ್ಲಿ (ಮೇ 17) ಅಪ್ಪಳಿಸಲಿವೆ. ಇದು…
ಕಾನ್ಪುರ: ಮದುವೆಯಾಗಿ ಹೊಸ ಜೀವನದ ಕನಸು ಕಾಣುತ್ತಿದ್ದ ವೈದ್ಯೆಯೊಬ್ಬರಿಗೆ ವಿವಾಹದ ಮೊದಲ ದಿನವೇ ಪತಿ ಆಘಾತ ನೀಡಿದ್ದಾನೆ. “ನಾನು ನಾಲ್ಕು ಮದುವೆಗಳನ್ನು ಮಾಡಿಕೊಳ್ಳಬಲ್ಲೆ, ನನಗೆ ಅನೇಕ ಅಫೇರ್ಗಳಿವೆ” ಎಂದು ಮದುವೆಯ ಮೊದಲ ರಾತ್ರಿಯೇ ಬೆದರಿಕೆ ಹಾಕುವ ಮೂಲಕ ಪತಿಯ ಅಸಲಿ ಮುಖ ಅನಾವರಣಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಾನ್ಪುರದ ಮಹಿಳಾ ವೈದ್ಯೆಯೊಬ್ಬರಿಗೆ ಮ್ಯಾರೇಜ್ ಸೈಟ್ ಮೂಲಕ ಸಂಭಲ್ ಜಿಲ್ಲೆಯ ವ್ಯಾಪಾರ ಕುಟುಂಬದ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಎರಡೂ ಕುಟುಂಬಗಳ ಸಮ್ಮತಿಯ ಮೇರೆಗೆ ಅದ್ಧೂರಿಯಾಗಿ ವಿವಾಹ ನೆರವೇರಿತ್ತು….