ಆಂಧ್ರಪ್ರದೇಶ: ಮಗು ತನ್ನ ಬಣ್ಣ ಹೊಂದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಜನ್ಮ ನೀಡಿದ ತಂದೆಯೇ ತನ್ನ ಕಂದಮ್ಮನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಭೀಕರ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಮಗುವಿನ ಚರ್ಮದ ಬಣ್ಣದ ಕುರಿತು ಅನುಮಾನ ವ್ಯಕ್ತಪಡಿಸಿ ಪತ್ನಿಯ ಶೀಲವನ್ನು ಶಂಕಿಸಿದ ಈ ನರಾಧಮ, ಹಸುಗೂಸಿನ ಪ್ರಾಣವನ್ನೇ ತೆಗೆದಿದ್ದಾನೆ. ಆರೋಪಿ ಮತ್ತು ಆತನ ಪತ್ನಿಯ ನಡುವೆ ಕಳೆದ ಕೆಲವು ದಿನಗಳಿಂದ ಮಗುವಿನ ಬಣ್ಣದ ವಿಚಾರವಾಗಿ ನಿರಂತರವಾಗಿ ಜಗಳ ನಡೆಯುತ್ತಿತ್ತು. “ಮಗು ತನ್ನಂತೆ ಕಪ್ಪಗಿಲ್ಲ, ಚರ್ಮದ ಬಣ್ಣ ಭಿನ್ನವಾಗಿದೆ;…
ಅನಂತಪುರ/ಬೆಂಗಳೂರು: ಪೋಷಕರು ಮದುವೆ ಮಾಡಬಹುದೆಂಬ ಅತಿಯಾದ ಆತಂಕಕ್ಕೆ ಒಳಗಾದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಜರುಗಿದೆ. ಅನಂತಪುರ ಜಿಲ್ಲೆಯ ಗಾರ್ಲದಿನ್ನೆ ಮಂಡಲದ ಮರ್ತಾದ್ ಗ್ರಾಮದ ರೂಪಕೀರ್ತನಾ (17) ಮೃತಪಟ್ಟ ದುರ್ದೈವಿ. ಈಕೆ ಇತ್ತೀಚೆಗಷ್ಟೇ ಪ್ರಥಮ ಪಿಯುಸಿ ಪರೀಕ್ಷೆ ಮುಗಿಸಿ ಬೇಸಿಗೆ ರಜೆಯಲ್ಲಿದ್ದಳು. ಮನೆಯಲ್ಲಿ ಪೋಷಕರು ಮಗಳಿಗೆ ಉತ್ತಮ ಸಂಬಂಧ ಬಂದರೆ ಮದುವೆ ಮಾಡುವ ಬಗ್ಗೆ ಸಾಧಾರಣವಾಗಿ ಚರ್ಚೆ ನಡೆಸುತ್ತಿದ್ದರು ಎನ್ನಲಾಗಿದೆ. ಹೆತ್ತವರ ಚರ್ಚೆಯನ್ನು…