ಕೋಯಿಕ್ಕೋಡ್: ಅಧಿಕಾರ, ಕಾನೂನು ಹಾಗೂ ಇಲಾಖೆಯ ಕಠಿಣ ನಿಯಮಗಳ ನಡುವೆಯೂ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ನೆರೆರಾಜ್ಯ ಕೇರಳದಲ್ಲಿ ನಡೆದ ಈ ಹೃದಯಸ್ಪರ್ಶಿ ಘಟನೆಯೇ ಸಾಕ್ಷಿ. ಸಾಲ ವಸೂಲಾತಿಗಾಗಿ ಬಡ ಕುಟುಂಬವೊಂದರ ಮನೆ ಜಪ್ತಿ ಮಾಡಲು ಹೋದ ಸರ್ಕಾರಿ ಬ್ಯಾಂಕ್ ಅಧಿಕಾರಿಯೊಬ್ಬರು, ಅಲ್ಲಿನ ಕಡು ಬಡತನವನ್ನು ಕಂಡು ಕರಗಿ, ಆ ಕುಟುಂಬದ ಸಂಪೂರ್ಣ ಸಾಲವನ್ನು ತಾವೇ ತೀರಿಸುವ ಮೂಲಕ ತಮ್ಮ ನಿವೃತ್ತಿಯ ದಿನದಂದೇ ಮನೆಯ ಮೂಲ ಪತ್ರಗಳನ್ನು ವಾಪಸ್ ನೀಡಿ ಎಲ್ಲರ ಮನ ಗೆದ್ದಿದ್ದಾರೆ. ಕೊಯಿಲಾಂಡಿ ಸಹಕಾರ…
ರಾಣೇಬೆನ್ನೂರು: ದಿನದಿಂದ ದಿನಕ್ಕೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೂ ಹಾವೇರಿ ಜಿಲ್ಲೆಯಲ್ಲೇ ದೊಡ್ಡ ವ್ಯಾಪಾರ ಕೇಂದ್ರವಾಗಿರುವ ವಾಣಿಜ್ಯ ನಗರಿ ರಾಣೇಬೆನ್ನೂರಿನ ನಾಗರಿಕರ ಸುರಕ್ಷತೆಗಾಗಿ ನಗರಕ್ಕೆ ಮತ್ತೊಂದು ಹೆಚ್ಚುವರಿ ಪೊಲೀಸ್ ಠಾಣೆಯ ಅಗತ್ಯವಿದೆ. ಈ ಕೂಡಲೇ ಹೊಸ ಠಾಣೆಯನ್ನು ಮಂಜೂರು ಮಾಡಿಕೊಡಬೇಕು ಎಂದು ರೈತರು, ವರ್ತಕರು, ಉದ್ಯಮಿಗಳು, ಕಾರ್ಮಿಕರು ಹಾಗೂ ನಾಗರಿಕರು ಪೂರ್ವ ವಲಯದ ಐಜಿಪಿ ಡಾ. ಬಿ. ಆರ್. ರವಿಕಾಂತೇಗೌಡ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಇಲ್ಲಿನ ಪೊಲೀಸ್ ಠಾಣೆಗೆ ಐಜಿಪಿ ಡಾ. ಬಿ. ಆರ್….