ಆನೇಕಲ್/ಸರ್ಜಾಪುರ: ಪ್ರದೇಶದಲ್ಲಿ ಅಕ್ರಮ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಸಮರ ಸಾರಿರುವ ಸರ್ಜಾಪುರ ಠಾಣೆ ಪೊಲೀಸರು, ಭರ್ಜರಿ ಕಾರ್ಯಾಚರಣೆ ನಡೆಸಿ ಅಂತರರಾಜ್ಯ ಗಾಂಜಾ ಪೆಡ್ಲರ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಿಂಡ್ಲು ಗ್ರಾಮದಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬಿಹಾರ ಮೂಲದ ಲಲಿತ್ ಕುಮಾರ್ (26) ಬಂಧಿತ ಆರೋಪಿ. ಮಿಂಚಿನ ದಾಳಿ, 1.1 ಕೆಜಿ ಗಾಂಜಾ ಜಪ್ತಿ: ತಿಂಡ್ಲು ಗ್ರಾಮದಲ್ಲಿ ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ…
ಬೆಂಗಳೂರು: ಇಂದಿನ ಧಾವಂತದ ಬದುಕಿನಲ್ಲಿ ಮೇಲ್ನೋಟಕ್ಕೆ ಅಥವಾ ಸನ್ನಿವೇಶಕ್ಕೆ ತಕ್ಕಂತೆ ಜನರನ್ನು ತಪ್ಪಾಗಿ ಅಳೆಯುವುದು ಸಾಮಾನ್ಯ. ಆದರೆ ನಿಜ ಜೀವನದಲ್ಲಿ ಸನ್ನಿವೇಶಗಳೆಲ್ಲವೂ ನಕಾರಾತ್ಮಕವಾಗಿರುವುದಿಲ್ಲ ಎಂಬುದಕ್ಕೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ನೈಜ ಘಟನೆಯೊಂದೇ ಸಾಕ್ಷಿ. ದಿನದ ಕೆಲಸ ಮುಗಿಸಿ ಮೆಟ್ರೋ ನಿಲ್ದಾಣದಿಂದ ತನ್ನ ಗಮ್ಯಸ್ಥಾನ ತಲುಪಲು ಯುವತಿಯೊಬ್ಬಳು ರಾಪಿಡೋ (Rapido) ಬೈಕ್ ರೈಡ್ ಬುಕ್ ಮಾಡಿದ್ದಳು. ಪ್ರಯಾಣ ಆರಂಭವಾದ ಕೆಲವೇ ನಿಮಿಷಗಳಲ್ಲಿ, ಜನಸಂದಣಿಯಿಲ್ಲದ ಅಪರಿಚಿತ ಸ್ಥಳದಲ್ಲಿ ಬೈಕ್ ತಾಂತ್ರಿಕ ತೊಂದರೆಯಿಂದ ಪದೇ ಪದೇ ಕೆಟ್ಟು…