ಬ್ಯಾಡಗಿ: ತಾಲೂಕಿನಾದ್ಯಂತ ಕಳೆದ ಹಲವು ದಿನಗಳಿಂದ ದುರ್ವಾಸನೆ ಹಾಗೂ ಮಣ್ಣು ಮಿಶ್ರಿತ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳ ಭಯ ಆವರಿಸಿದೆ. ಈ ಸಮಸ್ಯೆಗೆ ತಕ್ಷಣವೇ ಪರಿಹಾರ ಕಂಡುಕೊಂಡು ಶುದ್ಧ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಭೀಮರಾಜ ದಲಿತ ಸೇವಾ ಸಮಿತಿಯ ಹಾವೇರಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಪರಶುರಾಮ್ ಗದಗಕರ ಅವರು ಬ್ಯಾಡಗಿ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಸರಬರಾಜಾಗುತ್ತಿರುವ ಕುಡಿಯುವ ನೀರಿನ ಪೈಪ್ಲೈನ್ಗೆ ಹೊಳೆಯ ನೀರು ಮಿಶ್ರಣವಾಗುತ್ತಿರುವುದೇ ಈ…
ನವದೆಹಲಿ: ಕ್ರೈಮ್ ಮತ್ತು ಸಸ್ಪೆನ್ಸ್ ವೆಬ್ ಸಿರೀಸ್ ನೋಡಿ ಪ್ರೇರೇಪಿತಗೊಂಡು ತನ್ನ ಪತ್ನಿಯನ್ನೇ ಭೀಕರವಾಗಿ ಕೊಲೆ ಮಾಡಿದ್ದ ಸಾಫ್ಟ್ವೇರ್ ಎಂಜಿನಿಯರ್ ಒಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕೊಲೆಯ ಬಳಿಕ ಆಕಸ್ಮಿಕ ಸಾವು ಎಂದು ಬಿಂಬಿಸಲು ಯತ್ನಿಸಿ, ಲಕ್ಷಾಂತರ ರೂಪಾಯಿ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಯ ಕರಾಳ ಸಂಚನ್ನು ಪೊಲೀಸರು ಯಶಸ್ವಿಯಾಗಿ ಬಯಲಿಗೆಳೆದಿದ್ದಾರೆ. ಬಂಧಿತ ಆರೋಪಿ ಟೆಕ್ಕಿಯು ಪ್ರಸಿದ್ಧ ‘ದಿ ಸ್ಟೇರ್ಕೇಸ್’ (The Staircase) ಎಂಬ ವೆಬ್ ಸಿರೀಸ್ನಿಂದ ಪ್ರೇರಣೆ ಪಡೆದು ಈ ಭೀಕರ ಕೃತ್ಯಕ್ಕೆ ಯೋಜನೆ ರೂಪಿಸಿದ್ದ….