ರಾಣೇಬೆನ್ನೂರು : ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಿ ಹೊರಬರುತ್ತಿದ್ದ ನಿವೃತ್ತ ಶಿಕ್ಷಕರೊಬ್ಬರ ಎಟಿಎಂ ಕಾರ್ಡ್ ಅನ್ನು ಕೈಚಳಕದಿಂದ ಬದಲಾಯಿಸಿ, ಅವರ ಖಾತೆಯಿಂದ ₹44,754 ಹಣವನ್ನು ವಂಚಿಸಿರುವ ಘಟನೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿರುವ ‘ಇಂಡಿಯಾ-1’ ಎಟಿಎಂ ಕೇಂದ್ರದಲ್ಲಿ ಜರುಗಿದೆ. ಈ ಕುರಿತು ಸಂತ್ರಸ್ತ ನಿವೃತ್ತ ಶಿಕ್ಷಕರು ನೀಡಿದ ದೂರಿನನ್ವಯ ರಾಣೇಬೆನ್ನೂರು ನಗರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸರಿತ್ತಿ ಗ್ರಾಮದ ನಿವಾಸಿಯಾಗಿರುವ ನಿವೃತ್ತ ಶಿಕ್ಷಕ ಪುಟ್ಟನಗೌಡ ನಾಗನಗೌಡ ಪಾಟೀಲ (69) ಎಂಬುವರು…
ಪ್ರಯಾಣಿಕರ ಎದುರೇ ಹಲ್ಲೆ ನಡೆಸಿದ ಆರೋಪ – ವಿಡಿಯೋ ವೈರಲ್ ವಿಜಯಪುರ : ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ಆಟೋವನ್ನು ಬದಿಗೆ ಸರಿಸುವಂತೆ ಹೇಳಿದ್ದ ವಿಚಾರಕ್ಕೆ ಬಸ್ ಕಂಡಕ್ಟರ್ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಿಂದಗಿ ಯಿಂದ ಮದರಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್ನ ಕಂಡಕ್ಟರ್ ಮಲ್ಲು ಲಮಾಣಿ ಮೇಲೆ ಸಂತೋಷ ದೇವೂರ ಹಾಗೂ ಆತನ ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ನಿನ್ನೆ ಆಟೋವನ್ನು…