ಇಂದಿನ ಆಧುನಿಕ ಯುಗದಲ್ಲಿ ಕೈಯಲ್ಲಿ ದುಬಾರಿ ಐಫೋನ್ ಇದ್ದರೆ ಸಾಕು, ಅವರನ್ನು ಸಭ್ಯರು ಅಥವಾ ಸಂಸ್ಕಾರಿಗಳು ಎಂದು ಭಾವಿಸುವ ವಾತಾವರಣವಿದೆ. ಆದರೆ ದುಬಾರಿ ಗ್ಯಾಜೆಟ್ಗಳು ವ್ಯಕ್ತಿಯ ಸಂಸ್ಕಾರವನ್ನು ನಿರ್ಧರಿಸುವುದಿಲ್ಲ ಎಂಬುದಕ್ಕೆ ಸಾರ್ವಜನಿಕ ಸಾರಿಗೆಯಲ್ಲಿ ನಡೆದ ಘಟನೆಯೊಂದೇ ಸಾಕ್ಷಿ. ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳಿಗೆ ಅಸಭ್ಯವಾಗಿ ಪ್ರವರ್ತಿಸಿದ ಯುವಕನಿಗೆ ಕಂಡಕ್ಟರ್ ಮತ್ತು ಸಾರ್ವಜನಿಕರು ತಕ್ಕ ಪಾಠ ಕಲಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಸ್ನಲ್ಲಿ ನಡೆದ ವಿಕೃತ ಕೃತ್ಯ: ಮಾರುಕಟ್ಟೆಯಿಂದ ಮನೆಗೆ ಹಿಂತಿರುಗಲು ಖಾಸಗಿ ಬಸ್…
ಕೋಲಾರ: ಆಸ್ತಿ ವಿಚಾರವಾಗಿ ಗಂಡನನ್ನು ಕೊಲೆ ಮಾಡಿ, ಸ್ವತಃ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದ ಪತ್ನಿಯ ಹೇಳಿಕೆ ಇದೀಗ ದೊಡ್ಡ ತಿರುವು ಪಡೆದುಕೊಂಡಿದೆ. ತಾಯಿ ಮತ್ತು ಮಗ ಇಬ್ಬರೂ ಸೇರಿಕೊಂಡು ಈ ಕೊಲೆ ಕೃತ್ಯ ಎಸಗಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಕೋಲಾರ ತಾಲೂಕಿನ ಚನ್ನಸಂದ್ರ ಗ್ರಾಮದಲ್ಲಿ ನಿನ್ನೆ ರಾತ್ರಿ ನಾರಾಯಣಸ್ವಾಮಿ (66) ಎಂಬುವವರ ಕೊಲೆ ನಡೆದಿತ್ತು. ಕೊಲೆಯ ನಂತರ ಪತ್ನಿ ಜಗದಾಂಭ (58) ತಾನೊಬ್ಬಳೇ ಗಂಡನನ್ನು ಕೊಂದಿರುವುದಾಗಿ ಪೊಲೀಸರೆದುರು ಶರಣಾಗಿದ್ದರು. ಆದರೆ, ಪೊಲೀಸರು…