ಹರಿಹರ (ದಾವಣಗೆರೆ): ಭೂಮಿ ಅಳತೆ ಮಾಡಿಕೊಡಲು ರೈತರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಹರಿಹರದ ಸಹಾಯಕ ನಿರ್ದೇಶಕರ ಭೂ ದಾಖಲೆಗಳ (ADLR) ಕಚೇರಿಯ ಇಬ್ಬರು ಸಿಬ್ಬಂದಿ ಲೋಕಾಯುಕ್ತ ಅಧಿಕಾರಿಗಳ ಜಾಲಕ್ಕೆ ಸಿಕ್ಕಿಬಿದ್ದಿದ್ದಾರೆ. ಲೋಕಾ ಬಲೆಗೆ ಬಿದ್ದವರು: ರಾಮಪ್ಪ ಅಡಿವೆಪ್ಪ ದಾಸರ್ – ಸರ್ವೇ ಸೂಪರ್ವೈಸರ್, ADLR ಕಚೇರಿ, ಹರಿಹರ. ಆನಂದಪ್ಪ ನಾಯ್ಕ – ಸರ್ಕಾರಿ ಪರವಾನಗಿ ಭೂಮಾಪಕ (ಲೈಸೆನ್ಸ್ಡ್ ಸರ್ವೇಯರ್). ತಾಲೂಕಿನ ರೈತರಾದ ರುದ್ರೇಶ್ ಎಂಬುವವರು ತಮ್ಮ ಭೂಮಿಯ ಅಳತೆ (ಸರ್ವೇ) ಮಾಡಿಕೊಡುವಂತೆ ಕಚೇರಿಗೆ ಅರ್ಜಿ ಸಲ್ಲಿಸಿದ್ದರು….
ಹೊಸನಗರ: ತಾಲ್ಲೂಕಿನ ಹೊಸಕೊಪ್ಪ ಗ್ರಾಮದ ಪಟಗುಪ್ಪ ಸೇತುವೆ ಸಮೀಪದ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ಕರುವೊಂದನ್ನು ಕ್ರೂರವಾಗಿ ಹತ್ಯೆ ಮಾಡಿ, ಮಾಂಸ ಮಾರಾಟ ಮಾಡಲು ಯತ್ನಿಸಿದ್ದ ಜಾಲವನ್ನು ಭೇದಿಸುವಲ್ಲಿ ಹೊಸನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆಯ ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಕಳೆದ ಜೂನ್ 19, 2026ರಂದು ಈ ಜುಗುಪ್ಸಾಕರ ಘಟನೆ ಬೆಳಕಿಗೆ ಬಂದಿತ್ತು. ಶರಾವತಿ ಹಿನ್ನೀರಿನ ನಿರ್ಜನ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳು ಕರುವನ್ನು ಕೊಂದು, ಮಾಂಸ ಮಾರಾಟದ ಉದ್ದೇಶದಿಂದ ಸಿದ್ಧತೆ…