ಚನ್ನಗಿರಿ (ದಾವಣಗೆರೆ): ಅತ್ತೆಯ ಸ್ನೇಹಿತನ ಜೊತೆ ಸೊಸೆ ಅಕ್ರಮ ಸಂಬಂಧ ಹೊಂದಿದ್ದು, ಗಂಡನನ್ನೇ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿರುವ ಭೀಕರ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಅಜ್ಜಿಹಳ್ಳಿಯ ನಿವಾಸಿ ಶಕ್ತಿಕುಮಾರ್ ಎಂಬಾತ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆರಂಭದಲ್ಲಿ ಇದು ಆತ್ಮಹತ್ಯೆ ಎಂದೇ ಭಾವಿಸಲಾಗಿತ್ತು. ಆದರೆ, ಶಕ್ತಿಕುಮಾರ್ನ ಮುಗ್ಧ ಮಗಳು ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದು, ಪ್ರಕರಣಕ್ಕೆ ಭಾರಿ ತಿರುವು ಸಿಕ್ಕಿದೆ. ಘಟನೆಯ ಹಿನ್ನೆಲೆ: ಶಕ್ತಿಕುಮಾರ್ ತಾಯಿ…
ಭುವನೇಶ್ವರ: ಒಡಿಶಾದಲ್ಲಿ ಗಣೇಶ ಚತುರ್ಥಿ ಸಂಭ್ರಮದ ನಡುವೆಯೇ ಭಾರಿ ಶೋಕಾವೃತ ವಾತಾವರಣ ನಿರ್ಮಾಣವಾಗಿದೆ. ಗಣೇಶ ಮೂರ್ತಿ ವಿಸರ್ಜನೆಗಾಗಿ ನದಿ ಹಾಗೂ ಕೆರೆಗಳಿಗೆ ತೆರಳಿದ್ದ ವೇಳೆ ಸಂಭವಿಸಿದ ಸರಣಿ ಮುಳುಗುವ ದುರಂತಗಳಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 9 ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ ವಿವಿಧ ಜಲಮೂಲಗಳಲ್ಲಿ ಒಟ್ಟು 14 ಮುಳುಗುವ ಘಟನೆಗಳು ವರದಿಯಾಗಿದ್ದು, ಗಂಜಾಂ ಜಿಲ್ಲೆಯ ಹಿಂಜಿಲಿಕಟು, ಸುಂದರ್ಗಢ, ಭದ್ರಕ್, ಕೊರಾಪುಟ್ ಹಾಗೂ ಕಲಹಂಡಿ ಜಿಲ್ಲೆಗಳಲ್ಲಿ ಈ ಅನಾಹುತಗಳು ಸಂಭವಿಸಿವೆ. ಜಗತ್ಸಿಂಗ್ಪುರ ಜಿಲ್ಲೆಯ ಎರಸಮಾ ತಾಲೂಕಿನ…