ಜೈಪುರ: ಮದುವೆಯ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ವಿಧಿಯ ಕ್ರೂರ ಆಟದಿಂದಾಗಿ ಮರಣದ ಕತ್ತಲು ಆವರಿಸಿದೆ. ವಿವಾಹ ಪೂರ್ವ (ಪ್ರಿ-ವೆಡ್ಡಿಂಗ್) ಫೋಟೊಶೂಟ್ ಹಮ್ಮಿಕೊಂಡಿದ್ದ ಜೋಡಿಯ ಆಸೆಗೆ ಸರೋವರವೊಂದು ಯಮನಂತೆ ಎರಗಿದ್ದು, ಕಣ್ಣೆದುರೇ ವರ ನೀರು ಪಾಲಾಗಿರುವ ಹೃದಯವಿದ್ರಾವಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ಚಿತ್ತೋರ್ಗಢದ ನಿವಾಸಿಯಾದ ಅರ್ಜುನ್ ದಮಾಮಿ ಎಂಬ ಯುವಕನಿಗೆ ಇತ್ತೀಚೆಗಷ್ಟೇ ನಿಶ್ಚಿತಾರ್ಥವಾಗಿತ್ತು. ಮದುವೆಯ ತಯಾರಿಗಳು ಜೋರಾಗಿ ನಡೆಯುತ್ತಿದ್ದವು. ಈ ನಡುವೆ, ತಮ್ಮ ಪ್ರಿ-ವೆಡ್ಡಿಂಗ್ ಫೋಟೋ ಶೂಟ್ಗಾಗಿ ಅರ್ಜುನ್, ತನ್ನ ನಿಶ್ಚಿತ ವಧು ಮತ್ತು ಆಕೆಯ ಚಿಕ್ಕಪ್ಪನೊಂದಿಗೆ…
ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನೆಗಾಗಿ ದಾನವಾಗಿ ಬರುವ ಮೃತದೇಹಗಳ (ಶವಗಳ) ಖಾಸಗಿ ಅಂಗಗಳ ಬಗ್ಗೆ ಕಾಮಿಡಿ ಶೋ ಒಂದರಲ್ಲಿ ಅತ್ಯಂತ ವಿವಾದಾತ್ಮಕ ಹಾಗೂ ಅವಹೇಳನಕಾರಿ ಕಾಮೆಂಟ್ ಮಾಡಿ ಭಾರಿ ಸಾರ್ವಜನಿಕ ಆಕ್ರೋಶಕ್ಕೆ ಈಡಾಗಿದ್ದ ಮುಂಬೈನ ಪ್ರಸಿದ್ಧ ಕೆಇಎಂ (KEM) ಆಸ್ಪತ್ರೆಯ ವೈದ್ಯೆ ಸೇಜಲ್ ಪವಾರ್ ಕೊನೆಗೂ ಮಣಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಹಾಸ್ಯನಟ ಪ್ರಣೀತ್ ಮೋರೆ ಅವರ ಸ್ಟ್ಯಾಂಡ್ ಅಪ್ ಕಾಮಿಡಿ ಶೋ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ…