ತುಮಕೂರು: ಅಕ್ರಮ ಸಂಬಂಧಕ್ಕೆ ಅಡ್ಡಬಂದ ಸ್ವಂತ ತಮ್ಮನನ್ನೇ ಅತ್ಯಂತ ಬ್ರೂಟಲ್ ಆಗಿ ಕೊಲೆ ಮಾಡಿ, ನಿರ್ಮಾಣ ಹಂತದ ಮನೆಯ ಪಾಯದಲ್ಲಿ ಶವ ಹೂತಿಟ್ಟಿದ್ದ ಪಾಪಿ ಅಣ್ಣನಿಗೆ ತುಮಕೂರಿನ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆರೋಪಿ ರಾಜಾನಾಯ್ಕ್ (೪೫) ಶಿಕ್ಷೆಗೆ ಗುರಿಯಾದ ವ್ಯಕ್ತಿ. ದೃಶ್ಯ ಸಿನಿಮಾ ಮಾದರಿಯಲ್ಲಿ ನಡೆದಿದ್ದ ಈ ಭೀಕರ ಕೊಲೆ ಪ್ರಕರಣ ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಶಿರಾ ತಾಲೂಕಿನಲ್ಲಿ ೨೦೨೨ರ…
ವಿಜಯಪುರ, ಆ. 7: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಪ್ರಸಿದ್ಧ ಪವಾಡ ಬಸವೇಶ್ವರ ದೇಗುಲದಲ್ಲಿ ನಡೆದಿದ್ದ 51 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಮೂರ್ತಿ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಗುಜರಾತ್ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆ ದೇವಸ್ಥಾನದಿಂದ ಸುಮಾರು 32 ಕೆ.ಜಿ. ತೂಕದ ಬೆಳ್ಳಿ ಮೂರ್ತಿಯನ್ನು ಕಳ್ಳತನ ಮಾಡಲಾಗಿತ್ತು. ಕಳವು ಮಾಡಿದ ಬಳಿಕ ಆರೋಪಿಗಳು ಮೂರ್ತಿಯನ್ನು ಕರಗಿಸಿ ಬೆಳ್ಳಿ ಗಟ್ಟಿಗಳಾಗಿ ಪರಿವರ್ತಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. …