Skip to main content

Police Roundup

ಬೆಂಗಳೂರು: ಕೇವಲ ೨ ತೊಲೆ ಚಿನ್ನಕ್ಕಾಗಿ ಅತ್ತೆಯನ್ನೇ ಬರ್ಬರವಾಗಿ ಕೊಂದ ಅಳಿಯ!

Share News

ಬೆಂಗಳೂರು: ಕೇವಲ ಎರಡು ತೊಲೆ ಚಿನ್ನದ ಒಡವೆಗಾಗಿ ಅಳಿಯನೇ ತನ್ನ ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಬೆಂಗಳೂರಿನ ಯಲಹಂಕದಲ್ಲಿ ಬೆಳಕಿಗೆ ಬಂದಿದೆ.

 

​ಹಣ ಹಾಗೂ ಒಡವೆಯ ಆಸೆಗೆ ಬಿದ್ದ ಅಳಿಯ, ಸ್ವಂತ ಅತ್ತೆಯ ಪ್ರಾಣವನ್ನೇ ತೆಗೆಯುವ ಮೂಲಕ ಕ್ರೌರ್ಯದ ಮಿತಿ ಮೀರಿದ್ದಾನೆ. ಆರೋಪಿಯು ವೃದ್ಧೆಯ ಮೇಲಿದ್ದ ಕೇವಲ ೨ ತೊಲೆ ಚಿನ್ನಾಭರಣವನ್ನು ದೋಚುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

 

​ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಯಲಹಂಕ ವಲಯದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹಣದ ಹಪಹಪಿಗೆ ಸಂಬಂಧವನ್ನೇ ಮರೆತು ನಡೆಸಿದ ಈ ಭೀಕರ ಕೊಲೆ ಪ್ರಕರಣದ ಕುರಿತು ಯಲಹಂಕ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin