Skip to main content

Police Roundup

ಕೆ.ಆರ್. ಪೇಟೆಯಲ್ಲಿ ಅಮಾನವೀಯ ಘಟನೆ: ಬಾಣಂತಿ, 3 ತಿಂಗಳ ಮಗುವನ್ನು ಬೀದಿಗೆ ತಳ್ಳಿ ಮನೆಗೆ ಬೀಗ ಜಡಿದ ಮೈಕ್ರೋ ಫೈನಾನ್ಸ್

Share News

​ಕೆ.ಆರ್. ಪೇಟೆ (ಮಂಡ್ಯ): ಸಾಲದ ಕಂತು ಪಾವತಿಸಲು ಸಮಯ ಕೇಳಿದರೂ ಲೆಕ್ಕಿಸದೆ, ಬಾಣಂತಿ ಮತ್ತು ಮೂರು ತಿಂಗಳ ಹಸುಗೂಸನ್ನು ಮನೆಯಿಂದ ಹೊರತಳ್ಳಿ ಮನೆಗೆ ಬೀಗ ಜಡಿದಿರುವ ಅಮಾನವೀಯ ಘಟನೆ ತಾಲ್ಲೂಕಿನ ಬಿ.ಬಿ. ಕಾವಲು ಗ್ರಾಮದಲ್ಲಿ ನಡೆದಿದೆ.

 

​‘ಈಕ್ವಿಟಾಸ್ ಮೈಕ್ರೋ ಫೈನಾನ್ಸ್’ ಸಂಸ್ಥೆಯಿಂದ ಗ್ರಾಮದ ದೇವರಾಜು ಎಂಬುವವರ ಕುಟುಂಬವು ಸಾಲ ಪಡೆದಿತ್ತು. ಕುಟುಂಬದ ಆರ್ಥಿಕ ಪರಿಸ್ಥಿತಿ ಕ್ಷೀಣಿಸಿರುವ ಕಾರಣ ಸಾಲ ಮರುಪಾವತಿಸಲು ಕಾಲಾವಕಾಶ ನೀಡುವಂತೆ ಕುಟುಂಬಸ್ಥರು ಕಣ್ಣೀರಿಟ್ಟು ಮನವಿ ಮಾಡಿದ್ದರು. ಆದರೆ, ಸಂಸ್ಥೆಯ ಸಿಬ್ಬಂದಿ ಯಾವುದೇ ಮಾನವೀಯತೆ ತೋರದೆ ಬಾಣಂತಿ, ಮಗು ಹಾಗೂ ಅನಾರೋಗ್ಯಪೀಡಿತ ಮಹಿಳೆಯರನ್ನು ಬಲವಂತವಾಗಿ ಮನೆಯಿಂದ ಹೊರಹಾಕಿ ಬೀಗ ಜಡಿದಿದ್ದಾರೆ.

 

​5 ದಿನಗಳಿಂದ ಬೀದಿಯಲ್ಲೇ ಕಾಲ ಕಳೆಯುತ್ತಿರುವ ಕುಟುಂಬ

ಫೈನಾನ್ಸ್ ಸಿಬ್ಬಂದಿಯ ಈ ದೌರ್ಜನ್ಯದಿಂದಾಗಿ ದಲಿತ ಕುಟುಂಬವು ಕಳೆದ ಐದು ದಿನಗಳಿಂದ ಸೂರಿಲ್ಲದೆ, ಚಳಿಯಲ್ಲೇ ಬೀದಿಯಲ್ಲಿ ನರಳುವಂತಾಗಿದೆ. ಹಸುಗೂಸಿನೊಂದಿಗೆ ತಾಯಿ ಪಡುತ್ತಿರುವ ಯಾತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

 

​ಬೃಹತ್ ‘ತಮಟೆ ಚಳವಳಿ’ಯ ಎಚ್ಚರಿಕೆ

ಮೈಕ್ರೋ ಫೈನಾನ್ಸ್ ಸಂಸ್ಥೆಯ ಗೂಂಡಾವರ್ತನೆಯನ್ನು ಉಗ್ರವಾಗಿ ಖಂಡಿಸಿರುವ ದಲಿತಪರ ಸಂಘಟನೆಗಳು ಸಂಕಷ್ಟದಲ್ಲಿರುವ ಕುಟುಂಬದ ನೆರವಿಗೆ ಧಾವಿಸಿವೆ. ತಕ್ಷಣವೇ ಮನೆಯ ಬೀಗ ತೆರೆದು ಕುಟುಂಬಕ್ಕೆ ವಾಸಿಸಲು ಅವಕಾಶ ನೀಡದಿದ್ದರೆ, ಕೆ.ಆರ್. ಪೇಟೆಯ ಈಕ್ವಿಟಾಸ್ ಫೈನಾನ್ಸ್ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ‘ತಮಟೆ ಚಳವಳಿ’ ನಡೆಸಲಾಗುವುದು ಎಂದು ಸಂಘಟನೆಯ ನಾಯಕರು ಎಚ್ಚರಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin