ಬೆಂಗಳೂರು: ನಗರದ ಪ್ರತಿಷ್ಠಿತ UB ಸಿಟಿಯಲ್ಲಿ ಕಾರ್ಯಾಚರಿಸುತ್ತಿದ್ದ ಪ್ರಖ್ಯಾತ ‘ಸ್ಕೈ ಕಿಚನ್’ (Sky Kitchen) ರೆಸ್ಟೋರೆಂಟ್ಗೆ ಆರೋಗ್ಯ ಇಲಾಖೆ ಹಾಗೂ ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಸೀಲ್ ಮಾಡಿದ್ದಾರೆ. ತಪಾಸಣೆಯ ವೇಳೆ ಕಿಚನ್ನಲ್ಲಿ ಅತೀವ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದ್ದು, ಆಹಾರ ತಯಾರಿಕೆಗೆ ಕೊಳೆತು ಹೋಗಿದ್ದ ಮತ್ತು ಹಾಳಾಗಿದ್ದ ಚಿಕನ್ ಹಾಗೂ ಮಟನ್ ಅನ್ನು ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುತ್ತಿದ್ದ ಈ ಗಂಭೀರ…
ಜ್ಯಾಮರ್ ಕಾಟಕ್ಕೆ ಬೇಸತ್ತ ಹಳ್ಳಿಜನರು..! ಕಲಬುರಗಿ: ಕೇಂದ್ರ ಕಾರಾಗೃಹದ ಭದ್ರತೆಗಾಗಿ ಅಳವಡಿಸಿರುವ ನೆಟ್ವರ್ಕ್ ಜ್ಯಾಮರ್ ಇದೀಗ ಜೈಲಿನ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ ಎಂಬ ಆರೋಪ ಕೇಳಿಬಂದಿದೆ. ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಜ್ಯಾಮರ್ನ ವ್ಯಾಪ್ತಿ ಹೆಚ್ಚಳದಿಂದ ಸಿತನೂರು, ನಂದಿಕೂರು, ಪಾಣೆಗಾಂವ್, ಶಿರನೂರು, ಖಣದಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೊಬೈಲ್ ನೆಟ್ವರ್ಕ್ ಹಾಗೂ ಇಂಟರ್ನೆಟ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಜ್ಯಾಮರ್ನ ಪರಿಣಾಮವಾಗಿ ಮೊಬೈಲ್ ಕರೆಗಳು ಸರಿಯಾಗಿ ಸಂಪರ್ಕವಾಗದೆ, ಮಾತನಾಡುವ ಸಂದರ್ಭದಲ್ಲೇ…