ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿ ಹೊರಬಲ್ಲ ಗಜಪಡೆ ನಾಯಕ, ಕ್ಯಾಪ್ಟನ್ ಅಭಿಮನ್ಯು ಆನೆಯ ಎಡಭಾಗದ ದಂತದ ತುದಿ ಮುರಿದಿರುವ ಘಟನೆ ನಾಗರಹೊಳೆ ವಲಯದ ಮತ್ತಿಗೋಡು ಆನೆ ಶಿಬಿರದಲ್ಲಿ ನಡೆದಿದೆ. ಮತ್ತಿಗೋಡು ಆನೆ ಶಿಬಿರದಲ್ಲಿ ಎಂದಿನಂತೆ ಮರದ ದಿಮ್ಮಿಗಳನ್ನು ಸಾಗಿಸುವ ನಿಯಮಿತ ಕೆಲಸದಲ್ಲಿ ಅಭಿಮನ್ಯು ನಿರತನಾಗಿದ್ದನು. ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಬಲವಾದ ವಸ್ತುವೊಂದಕ್ಕೆ ತಗುಲಿ ಆನೆಯ ಎಡಭಾಗದ ದಂತದ ತುದಿ ಮುರಿದುಬಿದ್ದಿದೆ. ಗಜಪಡೆಯ ಅತ್ಯಂತ ಬಲಿಷ್ಠ ಹಾಗೂ ಹಿರಿಯ ಆನೆಗೆ ಈ ರೀತಿ…
ಬೆಂಗಳೂರು: ಹಿಂದೂಗಳ ಆರಾಧ್ಯ ದೈವವಾದ ಲಕ್ಷ್ಮೀ ದೇವಿಯ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ಪ್ರಸಿದ್ಧ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ವಿರುದ್ಧ ನಗರದ ಶಂಕರಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇತ್ತೀಚೆಗೆ ಆರ್ಯವರ್ಧನ್ ಗುರೂಜಿ ಅವರು ಲಕ್ಷ್ಮೀ ದೇವಿಯ ಕುರಿತು ಆಡಿದ ಮಾತುಗಳು ಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತಂದಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಿಂದೂ ಧರ್ಮದ ನಂಬಿಕೆಗಳನ್ನು ಅಪಹಾಸ್ಯ ಮಾಡುವಂತಹ ಹಾಗೂ ಕೀಳಾಗಿ ಬಿಂಬಿಸುವ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಭಕ್ತರು…