ದೊಡ್ಡಬೆಳವಂಗಲ: ದಾಬಸ್ಪೇಟೆ – ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿಯ ಮೂಗೇನಹಳ್ಳಿ ಗೇಟ್ ಸಮೀಪ ಟೊಮೆಟೊ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಲಾರಿಯಲ್ಲಿದ್ದ ಅಪಾರ ಪ್ರಮಾಣದ ಟೊಮೆಟೊ ಸಂಪೂರ್ಣವಾಗಿ ರಸ್ತೆ ಪಾಲಾಗಿದ್ದು, ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ. ವಿಷಯ ತಿಳಿದ ಕೂಡಲೇ ದೊಡ್ಡಬೆಳವಂಗಲ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆಯಲ್ಲಿದ್ದ ಲಾರಿ…
ಸಾಲ ವಸೂಲಿ ನೆಪದಲ್ಲಿ ಗ್ರಾಹಕರಿಗೆ ಕಿರುಕುಳ ನೀಡುವುದು, ಬೆದರಿಕೆ ಹಾಕುವುದು ಹಾಗೂ ಮಾನಹಾನಿ ಮಾಡುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸಂಪೂರ್ಣ ತಡೆ ನೀಡಿದೆ. ಬ್ಯಾಂಕ್ಗಳು ಹಾಗೂ NBFCಗಳು (ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು) ನಿಯೋಜಿಸುವ ಸಾಲ ವಸೂಲಿ ಏಜೆಂಟ್ಗಳು (Recovery Agents) ವಸೂಲಿ ಪ್ರಕ್ರಿಯೆಯಲ್ಲಿ ಗ್ರಾಹಕರ ಗೌರವ, ಗೌಪ್ಯತೆ ಮತ್ತು ಕಾನೂನಾತ್ಮಕ ಚೌಕಟ್ಟನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆರ್ಬಿಐ ಸ್ಪಷ್ಟಪಡಿಸಿದೆ. ಬೆದರಿಕೆ ಮತ್ತು ಕಿರುಕುಳ ನಿಷೇಧ: ಸಾಲಗಾರರಿಗೆ ಯಾವುದೇ ರೀತಿಯ ಮಾತಿನ ಅಥವಾ ದೈಹಿಕ…