ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಮರಳು ತುಂಬಿದ್ದ ಲಾರಿಯೊಂದು ಮನೆಗೆ ನುಗ್ಗಿ ಪಲ್ಟಿಯಾದ ಭೀಕರ ಘಟನೆ ಯಲಹಂಕ ಸಮೀಪದ ಮಾದನಹಳ್ಳಿಯಲ್ಲಿ ಮುಂಜಾನೆ ಸಂಭವಿಸಿದೆ. ಯಲಹಂಕ ಕಡೆಯಿಂದ ವೇಗವಾಗಿ ಬರುತ್ತಿದ್ದ ಮರಳು ಲಾರಿಯು ದಿಢೀರ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮನೆಯ ಗೋಡೆಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮನೆಯ ಗೋಡೆ ಸಂಪೂರ್ಣ ಜಖಂಗೊಂಡಿದ್ದು, ಅನಂತರ ಲಾರಿ ರಸ್ತೆಯಲ್ಲೇ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಲಾರಿಯ ಅಡಿಯಲ್ಲಿ ಸಿಲುಕಿಕೊಂಡಿದ್ದಾನೆ. ಚಾಲಕನಿಗೆ ನಿದ್ರೆ ಮಂಪರು ಆವರಿಸಿದ್ದೇ ಈ…
ಜ್ಯಾಮರ್ ಕಾಟಕ್ಕೆ ಬೇಸತ್ತ ಹಳ್ಳಿಜನರು..! ಕಲಬುರಗಿ: ಕೇಂದ್ರ ಕಾರಾಗೃಹದ ಭದ್ರತೆಗಾಗಿ ಅಳವಡಿಸಿರುವ ನೆಟ್ವರ್ಕ್ ಜ್ಯಾಮರ್ ಇದೀಗ ಜೈಲಿನ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ ಎಂಬ ಆರೋಪ ಕೇಳಿಬಂದಿದೆ. ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಜ್ಯಾಮರ್ನ ವ್ಯಾಪ್ತಿ ಹೆಚ್ಚಳದಿಂದ ಸಿತನೂರು, ನಂದಿಕೂರು, ಪಾಣೆಗಾಂವ್, ಶಿರನೂರು, ಖಣದಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೊಬೈಲ್ ನೆಟ್ವರ್ಕ್ ಹಾಗೂ ಇಂಟರ್ನೆಟ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಜ್ಯಾಮರ್ನ ಪರಿಣಾಮವಾಗಿ ಮೊಬೈಲ್ ಕರೆಗಳು ಸರಿಯಾಗಿ ಸಂಪರ್ಕವಾಗದೆ, ಮಾತನಾಡುವ ಸಂದರ್ಭದಲ್ಲೇ…