ಹುಣಸೂರು: ತಾಲೂಕಿನ ನೆರಳಕುಪ್ಪೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಚ್ಚುವಿನಹಳ್ಳಿ ಕಾಡಂಚಿನ ನೆರಳಕುಪ್ಪೆ ‘ಬಿ’ ಹಾಡಿಯ ಆದಿವಾಸಿ ಕುಟುಂಬಗಳು ತಲೆಮಾರುಗಳಿಂದ ಉಳುಮೆ ಮಾಡುತ್ತಿರುವ ಕಂದಾಯ ಭೂಮಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿ (AC) ಶ್ರೀಮತಿ ಕಾವ್ಯರಾಣಿ ಅವರಿಗೆ ಬುಧವಾರ (ಜೂನ್ 3) ಮನವಿ ಸಲ್ಲಿಸಿವೆ. ಹಾಡಿಯ ಹಿರಿಯರಾದ ಕೆಂಪಮ್ಮ ಮತ್ತು ಸೀತೆ ಅವರ ನೇತೃತ್ವದಲ್ಲಿ ಉಪವಿಭಾಗಾಧಿಕಾರಿಗಳನ್ನು ಭೇಟಿ ಮಾಡಿದ ನಿಯೋಗವು, ತಮಗೆ ಆಗುತ್ತಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಟ್ಟಿತು. ಕಾಡಿನಿಂದ ಹೊರಬಂದಾಗಿನಿಂದಲೂ ಸುಮಾರು 50 ವರ್ಷಗಳಿಂದ ನೆರಳಕುಪ್ಪೆ ಸರ್ವೇ…
ಮೈಸೂರು: ಗಡಿನಾಡು ಚಾಮರಾಜನಗರ ಜಿಲ್ಲೆಯ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಯದೇವ ಹೃದ್ರೋಗ ಸಂಸ್ಥೆಯು ಚಾಮರಾಜನಗರ ವೈದ್ಯಕೀಯ ಕಾಲೇಜು (CIMS) ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ವಾರಕ್ಕೊಮ್ಮೆ ವಿಶೇಷ ಹೃದಯ ತಪಾಸಣಾ ಶಿಬಿರ ನಡೆಸಲು ಚಿಂತನೆ ನಡೆಸಿದೆ ಎಂದು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಬಿ. ದಿನೇಶ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಾಮರಾಜನಗರದಲ್ಲಿ ಸಣ್ಣದೊಂದು ಹೃದ್ರೋಗ ಘಟಕವನ್ನು (Mini Cardiac Unit) ಪ್ರಾರಂಭಿಸಿ, ಪ್ರತಿ ಸೋಮವಾರ ಅಥವಾ…