Skip to main content

Police Roundup

ಬಸ್ ಹತ್ತುವಾಗ ಬಿದ್ದು ವಿದ್ಯಾರ್ಥಿನಿಗೆ ಗಾಯ — TMEA ಕಾಲೇಜ್ ಎದುರು ಕಡ್ಡಾಯ ಬಸ್ ತಡೆಗೆ SFI ಆಗ್ರಹ, KSRTC ಅಧಿಕಾರಿಗೆ ಮನವಿ

Share News

ಹಾವೇರಿ: ನಗರದ ಟಿಎಮ್‌ಇಎ (TMEA) ಶಿಕ್ಷಣ ಸಂಸ್ಥೆಯ ಎದುರು ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳನ್ನು ಕಡ್ಡಾಯವಾಗಿ ನಿಲ್ಲಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (SFI) TMEA ಕಾಲೇಜು ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ನಿಯಂತ್ರಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

 

​ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವ TMEA ಶಿಕ್ಷಣ ಸಂಸ್ಥೆ ಎದುರು ಬಸ್‌ಗಳನ್ನು ಕಡ್ಡಾಯವಾಗಿ ನಿಲ್ಲಿಸದೆ ಚಾಲಕರು ವೇಗವಾಗಿ ಚಲಾಯಿಸುತ್ತಿದ್ದಾರೆ. ಪರಿಣಾಮ, ಬಸ್ ಹತ್ತುವಾಗ ವಿದ್ಯಾರ್ಥಿನಿಯೊಬ್ಬಳು ಬಿದ್ದು ಗಾಯಗೊಂಡಿರುವ ಘಟನೆ ಸಂಭವಿಸಿದೆ. ಈ ಹಿಂದೆ ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಪ್ರತಿಭಟನೆ ನಡೆಸಿ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು SFI ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

 

​ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳು:

​ಕಡ್ಡಾಯ ಬಸ್ ತಡೆ: TMEA ಶಿಕ್ಷಣ ಸಂಸ್ಥೆಯ ಎದುರು ಪ್ರತಿಯೊಂದು ಬಸ್ ಅನ್ನು ಕಡ್ಡಾಯವಾಗಿ ನಿಲ್ಲಿಸಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಅನುಕೂಲ ಮಾಡಿಕೊಡಬೇಕು.

 

​ನಗರ ಸಾರಿಗೆ ಆರಂಭ: ಜಿಲ್ಲಾ ಕೇಂದ್ರದ ಬಸ್ ನಿಲ್ದಾಣದಿಂದ ಕಾಲೇಜು, ಹಾಸ್ಟೆಲ್ ಹಾಗೂ ಸರ್ಕಾರಿ ಕಚೇರಿಗಳು 5-6 ಕಿ.ಮೀ. ದೂರದಲ್ಲಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಕೂಡಲೇ ನಗರ ಸಾರಿಗೆ (ಟೌನ್ ಬಸ್) ಸೇವೆಯನ್ನು ಪ್ರಾರಂಭಿಸಬೇಕು.

 

​ಗ್ರಾಮೀಣ ಬಸ್ ಸೌಲಭ್ಯ: ಗ್ರಾಮೀಣ ಭಾಗಗಳಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬೆಳಿಗ್ಗೆ ಹಾಗೂ ಮಧ್ಯಾಹ್ನದ ವೇಳೆಯಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕು.

 

​ವಿಶೇಷ ಸಭೆ: ಗ್ರಾಮೀಣ ಪ್ರದೇಶದ ಬಸ್ ಸಮಸ್ಯೆಗಳನ್ನು ಬಗೆಹರಿಸಲು SFI ನೇತೃತ್ವದಲ್ಲಿ ತಕ್ಷಣವೇ ಸಭೆ ಕರೆಯಬೇಕು.

 

​ಈ ಸಂದರ್ಭದಲ್ಲಿ SFI ಜಿಲ್ಲಾಧ್ಯಕ್ಷ ಬಸವರಾಜ ಎಸ್., ಮುಖಂಡ ಅರುಣ್ ಕುಮಾರ್ ನಾಗವತ್, TMEA ಕಾಲೇಜು ಘಟಕದ ಅಧ್ಯಕ್ಷ ಕಾಂತೇಶ್ ಪೂಜಾರ, ಕಾರ್ಯದರ್ಶಿ ತಸ್ಲೀಮ್ ಭಾನು ಕುಂದೂರ, ಉಪಾಧ್ಯಕ್ಷರಾದ ಉದಯಕುಮಾರ್, ವೀರನಗೌಡ, ಸಹ ಕಾರ್ಯದರ್ಶಿಗಳಾದ ನಾಗರಾಜ, ಚೇತನ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin