ಬೆಂಗಳೂರು: ಕನ್ನಡ ಚಿತ್ರರಂಗದ ಉದಯೋನ್ಮುಖ ಹಾಗೂ ಬಹುಮುಖ ಪ್ರತಿಭೆ, ನಟಿ-ಗಾಯಕಿ ಚೈತ್ರಾ ಜೆ. ಆಚಾರ್ ಅವರ ಇನ್ಸ್ಟಾಗ್ರಾಮ್ ಫೋಟೋಗೆ ಅಸಭ್ಯವಾಗಿ ಸಂದೇಶ (ಮೆಸೇಜ್) ಕಳುಹಿಸಿ ವಿಕೃತಿ ಮೆರೆದಿದ್ದ ವ್ಯಕ್ತಿಯೊಬ್ಬನಿಗೆ ನಟಿ ಸರಿಯಾದ ಪಾಠ ಕಲಿಸಿದ್ದಾರೆ. ನಟಿ ನೇರವಾಗಿ ಬೆಂಗಳೂರು ಸಿಟಿ ಪೊಲೀಸರನ್ನು ಟ್ಯಾಗ್ ಮಾಡಿ ದೂರು ನೀಡುತ್ತಿದ್ದಂತೆ ಬೆದರಿದ ಆಸಾಮಿ, ತಕ್ಷಣವೇ ಕ್ಷಮೆಯಾಚಿಸಿ ತನ್ನ ಸೋಷಿಯಲ್ ಮೀಡಿಯಾ ಖಾತೆಯನ್ನೇ ಹೈಡ್ ಮಾಡಿಕೊಂಡಿದ್ದಾನೆ. ಸ್ಯಾಂಡಲ್ವುಡ್ನ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ 31 ವರ್ಷದ ಚೈತ್ರಾ ಆಚಾರ್ ಅವರು,…
ಬೆಂಗಳೂರು: ಯಾವುದೇ ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ಪ್ರಮುಖವಾದದ್ದು. ತಂತ್ರಜ್ಞಾನ ಬೆಳೆದಂತೆ ಮತ್ತು ಸಮಾಜದ ಸ್ವರೂಪ ಬದಲಾದಂತೆ, ಪೊಲೀಸ್ ಇಲಾಖೆಯೂ ಸಹ ಕಾಲಕ್ಕೆ ತಕ್ಕಂತೆ ಬದಲಾಗಬೇಕಿದೆ. ಕರ್ನಾಟಕದ ಇತಿಹಾಸದಲ್ಲಿ ಕಾವಲು ಪಡೆಗಳಿಗೆ ತನ್ನದೇ ಆದ ಗೌರವವಿದೆ. ಆದರೆ, ಪ್ರಸ್ತುತ ದಿನಗಳಲ್ಲಿ ಸಾರ್ವಜನಿಕರ ನಿರೀಕ್ಷೆಗಳು ಮತ್ತು ಇಲಾಖೆಯ ಕಾರ್ಯವೈಖರಿಯ ನಡುವೆ ಕೆಲವು ಕಂದಕಗಳಿದ್ದು, ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಾದ ತುರ್ತು ಅಗತ್ಯವಿದೆ. ಕರ್ನಾಟಕದ ಜನತೆ ಪೊಲೀಸ್ ಇಲಾಖೆಯಲ್ಲಿ…