ಮಂಗಳೂರು (ಉಳ್ಳಾಲ): ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ನಡೆದ ಕಳಪೆ ಚರಂಡಿ ಕಾಮಗಾರಿಯ ಬಣ್ಣ ಈಗ ಬಯಲಾಗಿದ್ದು, ನೂತನವಾಗಿ ನಿರ್ಮಿಸಲಾದ ಚರಂಡಿ ಕುಸಿದು ಲಾರಿಯೊಂದು ಅಪಘಾತಕ್ಕೀಡಾದ ಘಟನೆ ನಡೆದಿದೆ. ಈ ಅವಘಡದಿಂದಾಗಿ ಸ್ಥಳೀಯರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಉಳ್ಳಾಲದ ಅಬ್ಬಕ್ಕ ವಾರ್ಡ್ನಲ್ಲಿ ಇತ್ತೀಚೆಗಷ್ಟೇ ಹೊಸ ಚರಂಡಿ ನಿರ್ಮಾಣ ಮಾಡಲಾಗಿತ್ತು. ಇಂದು ಲಾರಿಯೊಂದು ಈ ಚರಂಡಿಯ ಮೇಲೆ ಚಲಿಸುತ್ತಿದ್ದಾಗ, ಚರಂಡಿಯ ಸ್ಲ್ಯಾಬ್ಗಳು ದಿಢೀರನೆ ಕುಸಿದಿವೆ. ಪರಿಣಾಮವಾಗಿ ಲಾರಿಯು ಚರಂಡಿಯೊಳಗೆ ಸಿಲುಕಿ ಪಲ್ಟಿಯಾಗುವ ಸ್ಥಿತಿಗೆ ತಲುಪಿದೆ….
ಚನ್ನಪಟ್ಟಣ: ನಾಗರಹಾವು ಕಚ್ಚಿ ಚಿಕಿತ್ಸೆಗಾಗಿ ಬಂದಿದ್ದ ನಾಲ್ಕೂವರೆ ವರ್ಷದ ಬಾಲಕನಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದ ಪರಿಣಾಮ, ಬಾಲಕ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ. ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯ ಕರ್ತವ್ಯನಿರತ ವೈದ್ಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ನೇರ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಏಪ್ರಿಲ್ 28ರಂದು ಸಂಜೆ 5:50ರ ಸುಮಾರಿಗೆ ಸಾತ್ವಿಕ್ ಎಂಬ ಬಾಲಕನಿಗೆ ನಾಗರಹಾವು ಕಚ್ಚಿತ್ತು. ತಕ್ಷಣ ಎಚ್ಚೆತ್ತ ಕುಟುಂಬಸ್ಥರು ಬಾಲಕನನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ…