ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮನೆಯಲ್ಲಿ ನಡೆದಿದ್ದ ಭಾರಿ ಮೊತ್ತದ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಶಿವಾಜಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಸಚಿವರ ತಾಯಿಯ ರಕ್ತಸಂಬಂಧಿಯೇ ಈ ಕೃತ್ಯದ ಮಾಸ್ಟರ್ ಮೈಂಡ್ ಆಗಿದ್ದು, ಈತನೂ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ಸುಮಾರು 1.13 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಚಿವರ ತಾಯಿಯ ಹತ್ತಿರದ ಸಂಬಂಧಿ ಸೈಯದ್ ಅಮೀರ್ ಹಾಗೂ ಆತನ ಸಹಚರ ಅಮಿರ್ ಅಹ್ಮದ್ ಬಂಧಿತ ಆರೋಪಿಗಳು. ಸೈಯದ್ ಅಮೀರ್ ಮನೆಯವನಂತೆ…
ಪಟ್ನಾ: “ಛಲವೊಂದಿದ್ದರೆ ಎಂತಹ ಕಷ್ಟವನ್ನೂ ಮೆಟ್ಟಿ ನಿಲ್ಲಬಹುದು” ಎಂಬುದನ್ನು ಬಿಹಾರದ ತಾಯಿ-ಮಗ ಜಗತ್ತಿಗೆ ಸಾಬೀತುಪಡಿಸಿದ್ದಾರೆ. ಬಡತನದ ಬೇಗೆಯ ನಡುವೆಯೂ ಹಗಲಿರುಳು ಎನ್ನದೆ ದುಡಿದು, ಮಗನ ಶಿಕ್ಷಣಕ್ಕಾಗಿ ತನ್ನ ಜೀವನವನ್ನೇ ಸವೆಸಿದ ತಾಯಿ ಲಕ್ಷ್ಮೀ ದೇವಿ ಅವರ ಕನಸನ್ನು ಮಗ ನನಸು ಮಾಡಿದ್ದಾನೆ. ಬಿಹಾರ ಮೂಲದ ಲಕ್ಷ್ಮೀ ದೇವಿ ಅವರು ತಮ್ಮ ಮಗನಿಗೆ ಉತ್ತಮ ಭವಿಷ್ಯ ರೂಪಿಸಬೇಕೆಂಬ ಹಂಬಲದಿಂದ ದಿನವೊಂದಕ್ಕೆ ಬರೋಬ್ಬರಿ 18 ಗಂಟೆಗಳ ಕಾಲ ಬೀಡಿ ಕಟ್ಟುವ ಕಠಿಣ ಕೆಲಸ ಮಾಡುತ್ತಿದ್ದರು. ಬೆನ್ನು ಮುರಿಯುವ ಈ…