ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠವನ್ನು ಸ್ಥಾಪಿಸಬೇಕೆಂಬ ಹೋರಾಟ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ಆಡಳಿತಾತ್ಮಕ ವಿಳಂಬ ಧೋರಣೆ ಸಾರ್ವಜನಿಕರ ಹಾಗೂ ವಕೀಲರ ತೀವ್ರ ಕೆಂಗಣ್ಣಿಗೆ ಗುರಿಯಾಗಿದೆ. ಮತ್ತೊಂದೆಡೆ, ಕರಾವಳಿ (ಮಂಗಳೂರು) ಮತ್ತು ಮಲೆನಾಡು (ಶಿವಮೊಗ್ಗ) ಭಾಗದ ನಡುವೆ ಪೀಠಕ್ಕಾಗಿ ತೀವ್ರ ಪೈಪೋಟಿ ಆರಂಭವಾಗಿದ್ದು, ಶಿವಮೊಗ್ಗ ತನ್ನ ಹಕ್ಕಿಗಾಗಿ ಹೋರಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಬೆಂಗಳೂರು ಪ್ರಧಾನ ಹೈಕೋರ್ಟ್ನ ಕಾರ್ಯದೊತ್ತಡವನ್ನು ಕಡಿಮೆ…
ಚರೈಡಿಯೋ (ಅಸ್ಸಾಂ): ಅಕ್ಷರ ಕಲಿಸಿ ಸಂಸ್ಕಾರ ನೀಡಬೇಕಾದ ಶಿಕ್ಷಕನೇ ಮಕ್ಕಳ ಮೇಲೆ ದೈತ್ಯನಂತೆ ವರ್ತಿಸಿರುವ ಅಮಾನವೀಯ ಘಟನೆಯೊಂದು ಅಸ್ಸಾಂನ ಚರೈಡಿಯೋ ಜಿಲ್ಲೆಯ ಮಥುರಾಪುರ ಬಗಿಚಾ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ತರಗತಿ ಕೋಣೆಯೊಳಗೆ ಶಿಕ್ಷಕನು ಸಣ್ಣ ಮಕ್ಕಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಬಯಲಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶಾಲೆಯ ಶಿಕ್ಷಕ ಮೊಹಮ್ಮದ್ ಆರಿಫುಲ್ ಇಸ್ಲಾಂ (51) ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಈ ಶಿಕ್ಷಕ…